Friday, June 20, 2025

Latest Posts

ಏಡ್ಸ್ ತಡೆಯಲು ಜಾಗೃತಿ ಅಗತ್ಯ: ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್

- Advertisement -

ಮಂಡ್ಯ: ಏಡ್ಸ್ ರೋಗ ಮಾರಣಾಂತಿಕ ರೋಗವಾಗಿದ್ದು, ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ ಎಂದು ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಯತೀಶ್ ಎನ್ ಅವರು ತಿಳಿಸಿದರು. ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ, ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. 2030ರ ಅಂತ್ಯದೊಳಗೆ ಭಾರತದಾದ್ಯಂತ ಏಡ್ಸ್ ನಿವಾರಣೆ ಮಾಡಬೇಕೆಂಬ ಉದ್ದೇಶ  ಭಾರತ ಸರ್ಕಾರದಾಗಿರುತ್ತದೆ. ಸಾರ್ವಜನಿಕರು ಏಡ್ಸ್ ರೋಗ ಬಾರದಂತೆ ಮುನ್ನಚ್ಚರಿಕ ಕ್ರಮಗಳನ್ನು ವಹಿಸಬೇಕು. ಹೆಚ್‌ ಐ. ವಿ ರೋಗಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮತ್ತು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ತಿಳಿದುಕೊಂಡು ಸದುಪಯೋಗಪಡಿಸಿಕೊಂಡು ಜವಾಬ್ದಾರಿಯುತವಾದ ಜೀವನ ನಡೆಸಬೇಕು ಎಂದು ಹೇಳಿದರು.

ಬಿಜೆಪಿ ಪಕ್ಷಕ್ಕೆ ಫೈಟರ್ ರವಿ ಸೇರ್ಪಡೆ ವಿಚಾರ : ಮಂಡ್ಯದಲ್ಲಿ ಬೆಂಬಲಿಗರಿಂದ ಸುದ್ಧಿಗೋಷ್ಠಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿ ಕುಮಾರಿ ಅವರು ಮಾತನಾಡಿ  ನಾವೆಲ್ಲರೂ ಇಂದು ಏಡ್ಸ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. 2030ರ ವೇಳೆಗೆ ಏಡ್ಸ್ ಮುಕ್ತ ಭಾರತವನ್ನು ನಾವು ಕಾಣಬೇಕು ಎಂದರು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಈ ಹಕ್ಕಿನ ಅಡಿಯಲ್ಲಿ ಏಡ್ಸ್ ಭಾದಿತ  ವ್ಯಕ್ತಿಗಳಿಗೆ ಯಾವ ರೀತಿಯಾದಂತಹ ಹಕ್ಕುಗಳಿವೆ ಎಂದು ತಿಳಿದಿಕೊಳ್ಳಬೇಕು. ಏಡ್ಸ್ ಭಾದಿತ ವ್ಯಕ್ತಿ ಸಹ ನಮ್ಮ ನಿಮ್ಮಂತೆಯೇ ಜೀವಿಸುವ ಹಕ್ಕಿದೆ ಎಂದರು.

ಕೆ.ಜಿ.ಎಫ್ ತಾತನ ಆರೋಗ್ಯದಲ್ಲಿ ಏರುಪೇರು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಒಣ ತ್ವಚೆ ಇರುವವರು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿ..!

- Advertisement -

Latest Posts

Don't Miss