Thursday, June 19, 2025

Latest Posts

akhilesh yadav : ರೈತರಿಗೆ ಬಂಪರ್ ಆಫರ್ ಕೊಟ್ಟ ಅಖಿಲೇಶ್ ಯಾದವ್

- Advertisement -

ಉತ್ತರ ಪ್ರದೇಶದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ತ ಅಖಿಲೇಶ್ ಯಾದವ್ ರೈತರಿಗಾಗಿ
ಗುಡ್ ನ್ಯೂಸ್ ನೀಡಿದ್ದಾರೆ. ಎಲ್ಲಾ ರೈತರಿಗೆ ಉಚಿತ ವಿದ್ಯುತ್ ಮತ್ತು ನೀರಾವರಿಗೆ ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಅಖಿಲೇಶ್ ಹೇಳಿದ್ದಾರೆ. ಲಕ್ನೋದಲ್ಲಿ ಸಮಾವೇಶದಲ್ಲಿ ಎಸ್ಪಿ ಮುಖ್ಯಸ್ತ ಅಖಿಲೇಶ್ ಯಾದವ್ ರೈತರಿಗೆ ವಿಮೆ ಮತ್ತು ಪಿಂಚಣಿ ವ್ಯವಸ್ಥೆ ಮಾಡಲಾಗುವುದು
ಎಂದು ಹೇಳಿದ್ದಾರೆ.

ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್, ಉತ್ತರ ಪ್ರದೇಶದ ಚುನಾವಣೆಗೆ ದೊಡ್ಡ ದೊಡ್ಡ ಷಡ್ಯಂತ್ರಗಳನ್ನು ಮಾಡಲಾಗುತ್ತಿದೆ. ಬಿಜೆಪಿಯ ಪ್ರಣಾಳಿಕೆ ನಂತರ ನಮ್ಮ ಪ್ರಣಾಳಿಕೆ ಬರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಚುನಾವಣೆಗೆ ಸಂಚು ರೂಪಿಸಲು ಬೇರೆ ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಉತ್ತರಪ್ರದೇಶಕ್ಕೆ ಕರೆತರಲಾಗುತ್ತಿದೆ. ಎಂದು ಆರೋಪಿಸಿದರು.

- Advertisement -

Latest Posts

Don't Miss