Friday, September 20, 2024

Latest Posts

ಶಾಲೆಗಳಲ್ಲಿ ಬಿಸಿ ಊಟ ಆರಂಭ..!

- Advertisement -

www.karnatakatv.net: ಮಹಾಮಾರಿ ಕೊರೊನಾ ಹಿನ್ನಲೇ ದೇಶಾದ್ಯಂತ ಶಾಲಾ ಕಾಲೇಜುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು, ಆದರೆ ಈಗ ಕೊರೊನಾ ತನ್ನ ಅಟ್ಟಹಾಸವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರುವದಕ್ಕೆ ಮರಳಿ ಶಾಲಾ ಕಾಲೇಜುಗಳನ್ನ ಓಪೆನ್ ಮಾಡಲಾಗಿದೆ. ಶಾಲೆಗಳು ಮುಚ್ಚಿದ್ದರಿಂದ ಕಲಿಕೆ ಜೊತೆಗೆ ಪೌಷ್ಟಿಕ ಆಹಾರದ ಕೊರತೆಯನ್ನು ಅನೇಕ ಮಕ್ಕಳು ಎದುರಿಸಿದ್ದಾರೆ. ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ಎಸ್. ಆರ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ.

ಬಿಸಿ ಊಟದಿಂದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. “ಕೋವಿಡ್ -19 ಸಾಂಕ್ರಾಮಿಕವು ಕಳೆದ 18 ತಿಂಗಳುಗಳಿAದ ಮಕ್ಕಳನ್ನು ಶಾಲೆಯಿಂದ ಹೊರಗಿಟ್ಟ ನಂತರ ಅಕ್ಷಯ ಪಾತ್ರೆ ಪ್ರತಿಷ್ಠಾನವು ಇಂದು ಮಧ್ಯಾಹ್ನದ ಊಟ ಯೋಜನೆಯನ್ನು ಪುನರಾರಂಭಿಸಿದೆ, ಕರ್ನಾಟಕ ರಾಜ್ಯ ಸರ್ಕಾರದ ಧನಾತ್ಮಕ ನಿರ್ಧಾರಕ್ಕೆ ಧನ್ಯವಾದಗಳು,” ಎಂದು ಬೆಂಗಳೂರು ಮೂಲದ ಅಕ್ಷಯಪಾತ್ರ ಫೌಂಡೇಶನ್ ಪ್ರತಿಕ್ರಿಯಿಸಿದೆ. ಇಂದು, ರಾಜಾಜಿನಗರ, ವಸಂತಪುರ ಮತ್ತು ಜಿಗಣಿ ಕೇಂದ್ರೀಕೃತ ಅಡುಗೆಮನೆಗಳಲ್ಲಿರುವ ನಮ್ಮ ಮೂರು ಅಡುಗೆಮನೆಗಳ ಮೂಲಕ ಬೆಂಗಳೂರು ಮತ್ತು ಸುತ್ತಮುತ್ತಲಿನ 789 ಶಾಲೆಗಳಲ್ಲಿ ಓದುತ್ತಿರುವ 75,000 ಕ್ಕೂ ಹೆಚ್ಚು ಮಕ್ಕಳಿಗೆ ಇಂದಿನಿAದ ಸೇವೆ ಆರಂಭಿಸಲಾಗಿದೆ.

”18 ತಿಂಗಳ ನಂತರ ಶಾಲೆಗಳನ್ನು ಪುನರಾರಂಭಿಸಿದ ನಂತರ, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಆಲೂಗಡ್ಡೆ ಮತ್ತು ಎಲೆಕೋಸು ತುಂಬಿದ ವೆಜ್ ಬಿರಿಯಾನಿ ಮತ್ತು ಮೂಂಗ್ ದಾಲ್ ಪಾಯಸಂ ರೂಪದಲ್ಲಿ ಸಿಹಿ ಹೀಗೆ ನಾವು ಫಲಾನುಭವಿಗಳಿಗೆ ವಿಶೇಷ ಮೆನುವನ್ನು ತಯಾರಿಸಿದ್ದೇವೆ,” ಎಂದು ಅಕ್ಷಯಪಾತ್ರ ಸಂಸ್ಥೆಯ ಪ್ರತಿನಿಧಿ ತಿಳಿಸಿದರು.

- Advertisement -

Latest Posts

Don't Miss