- Advertisement -
www.karnatakatv.net: ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸಮೀಪದ ಬೋರನಕಣಿವೆ ಜಲಾಶಯದಲ್ಲಿ ಸುಮಾರು 3 ಅಡಿ ಎತ್ತರದ ಆಂಜನೇಯಸ್ವಾಮಿ ಮೂರ್ತಿಯ ಕಲ್ಲಿನ ವಿಗ್ರಹ ಪತ್ತೆಯಾಗಿದೆ.
ಕಳೆದ 3 ದಿನಗಳಿಂದ ಇಲ್ಲಿನ ಬೋರನಕಣಿವೆ ಜಲಾಶಯದ ಕಾಲುವೆಯೊಳಗೆ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ಈ ವೇಳೆ ಕಲ್ಲಿನ ಆಂಜನೇಯ ವಿಗ್ರಹ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಈ ಮೂರ್ತಿಯನ್ನು ನೀರಿನಿಂದ ಶುದ್ಧಗೊಳಿಸಿ ಸುರಕ್ಷಿತವಾಗಿಟ್ಟಿದ್ದಾರೆ. ಇನ್ನು ಹೂಳು ತುಂಬಿರೋ ಈ ಪ್ರದೇಶದಲ್ಲಿ ಈ ಮೂರ್ತಿ ಹೇಗೆ ಬಂತು, ಇದನ್ನು ಯಾರಾದ್ರೂ ತಂದು ಹಾಕಿದ್ದಾರಾ ಅನ್ನೋದು ಗ್ರಾಮಸ್ಥರಲ್ಲಿ ಮೂಡಿದೆ.
ಈ ವಿಗ್ರಹವನ್ನು ಇಲ್ಲಿನ ಜಲಾಶಯದ ಬಳಿಯೇ ಪ್ರತಿಷ್ಠಾಪಿಸೋ ಕುರಿತಾಗಿ ಸ್ಥಳೀಯರು ಚರ್ಚೆ ನಡೆಸ್ತಿದ್ದಾರೆ.
ದರ್ಶನ್ ಕೆ ಡಿ ಆರ್, ಕರ್ನಾಟಕ ಟಿವಿ- ತುಮಕೂರು
- Advertisement -