- Advertisement -
www.karnatakatv.net : ಚಾಮರಾಜನಗರ : ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ ಪಕ್ಷದ ಹೈ ಕಮಾಂಡ್ ನೊಂದಿಗೆ ಚರ್ಚಿಸಿ ವಾರದೊಳಗೆ ಸಚಿವ ಸಂಪುಟ ರಚನೆ ಮಾಡಲಿದ್ದಾರೆ.. ಸಚಿವ ಸಂಪುಟದಲ್ಲಿ ಯಾರಿರಬೇಕೆಂಬುದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ…ಸಚಿವ ಸಂಪುಟ ರಚನೆಯಲ್ಲಿ ಮದ್ಯ ಪ್ರವೇಶ ಮಾಡುವುದಿಲ್ಲ ಎಂದು ಚಾಮರಾಜನಗರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಸಚಿವ ಸಂಪುಟ ರಚನೆ ಮಾಡಲು ಸ್ವತಂತ್ರರಿದ್ದಾರೆ..ನಾನು ಅವರಿಗೆ ಸಾಂತ್ವಾನ ಹೇಳಲು ಬಂದಿದ್ದೇನೆ ಮುಂದಿನ ಚುನಾವಣೆಯಲ್ಲಿ 130-135 ಸ್ಥಾನ ಗೆಲ್ಲಬೇಕು ಹಾಗೇ ಗಣೇಶ ಹಬ್ಬದ ನಂತರ ಪ್ರತಿ ವಾರ ಒಂದು ಜಿಲ್ಲಾ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವೆ.. ಜನರ ಅಭಿವೃದ್ದಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಾಗುವ ಭರವಸೆ ಇದೆ ಎಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.
- Advertisement -