Hubli News: ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದುಕೊಂಡು ಬಂದಿದ್ದ ಹವ್ಯಾಸಿ ಪತ್ರಕರ್ತನನ್ನ ಥಳಿಸಿದ್ದಾರೆಂದು ಎಎಸ್ಐ ಮೇಲೆ ಆರೋಪ ಕೇಳಿ ಬಂದಿದೆ.
ಭರತ ತುಳಜಾಸಾ ಕಾಟವೆ ಎಂಬುವವರನ್ನೇ ವಿನಾಕಾರಣ ಹೊಡೆಯಲಾಗಿದೆ ಎಂದು ಹೇಳಲಾಗಿದ್ದು, ಭರತ ಅವರ ಅಂಡಿಗೆ ಕೂಡಲು ಆಗದಂತೆ ಹೊಡೆಯಲಾಗಿದೆ.
ಈ ಕುರಿತು ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಎಸಿಪಿ ಅವರಿಂದ ತನಿಖೆ ಮಾಡಲು ಆದೇಶಿಸಿದ್ದಾರೆ. ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಜನರ ಹತ್ತಿರಕ್ಕೆ ಹೋಗುತ್ತಿದ್ದರೇ, ಕೆಲವರು ಈ ಥರ ಮಾಡುತ್ತಿರುವುದು ವಿಚಿತ್ರವೆನಿಸುತ್ತದೆ.



