ಬೆಂಗಳೂರಿನ ಬಹುತೇಕ ಮಸೀದಿಗಳಲ್ಲಿ ಧ್ವನಿ ವರ್ಧಕ ನಿಯಂತ್ರಣ ಸಾಧನ ಅಳವಡಿಕೆ – ಶಾಸಕ ಜಮೀರ್ ಅಹ್ಮದ್ ಖಾನ್

ಬೆಂಗಳೂರು: ನಗರದ ಬಹುತೇಕ ಮಸೀದಿಗಳಲ್ಲಿ ಮಾರ್ಗಸೂಚಿಗಳಿಗೆ ಅನುಸಾರವಾಗಿ ಧ್ವನಿ ವರ್ಧಕ ನಿಯಂತ್ರಣಾ ಸಾಧನಗಳನ್ನು ಅಳವಡಿಸಿರುವುದರಿಂದ ಈಗ ಅಜಾನ್ ನ ಸಮಸ್ಯೆಯಿಲ್ಲ ಎಂದು ಚಾಮರಾಜಪೇಟೆ ಶಾಸಕ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಇಂದು ನಡೆದ ದಾರುಲ್ ಯು ಲೂಮ್ ಸೆಮಿನರಿಯ ರೆಕ್ಟರ್ ಸಬೀಲೂರು ರಶಾದ್ ಸಭೆಯಲ್ಲಿ ಸಂವಾದ ನಡೆಸಿ ಮಾತನಾಡಿದ ಅವರು, ಈಗಾಗಲೇ ಬಹುತೇಕ ಮಸೀದಿಗಳಲ್ಲಿ ಸುತ್ತೋಲೆಯಲ್ಲಿ ಸೂಚಿಸಿರುವ ಡೆಸಿಬಲ್ ಗಳಿಗೆ ಅನುಗುಣವಾಗಿ ಧ್ವನಿ ವರ್ಧಕ ನಿಯಂತ್ರಣಾ ಸಾಧನಗಳನ್ನು ಅಳವಡಿಸಿರುವುದರಿಂದ ಅಜಾನ್ ಸಮಸ್ಯೆ ಇಲ್ಲ ಎಂದರು.

ಫಜರ್ (ಬೆಳಿಗ್ಗೆ) ಅಜಾನ್ ಸಮಸ್ಯೆಯನ್ನು ಪರಿಹರಿಸಬೇಕು. ಏಕೆಂದರೆ ಅದು ಸುತ್ತೋಲೆಯ ಅಡಿಯಲ್ಲಿ ಸೂಚಿಸಿರುವ ಸಮಯದ ಚೌಕಟ್ಟಿನಲ್ಲಿ ಬರುವುದಿಲ್ಲ. ಪ್ರತಿ ಮಸೀದಿಗಳಲ್ಲಿಯೂ ಸಾಧನಗಳನ್ನು ಅಳವಡಿಸಲು ತಾಲೂಕು ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ನಿಗದಿತ ಕಾಲಮಿತಿಯೊಳಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಹೊರಡಿಸಲಾದ ಸರಿಯಾದ ನಮೂನೆಯಲ್ಲಿ ಅಪೇಕ್ಷಿತ ಅರ್ಜಿಯನ್ನು ಒದಗಿಸುವ ಮೂಲಕ ವಿವರಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.

ಮುಂದುವರಿದು ಮಾತನಾಡಿದ ಅವರು, ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸುವ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಶಾಸಕರಿಗೆ ವಹಿಸಿ, ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಕ್ರಿಯೆಯನ್ನು ಸರಳೀಕರಿಸಬೇಕೆಂದು ಶಾಸಕ ಜಮೀರ್ ಅಹ್ಮದ್ ಅಭಿಪ್ರಾಯ ಪಟ್ಟರು.

About The Author