Dharawad News : ಧಾರವಾಡ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಭೈರಪ್ಪ ಕೊಳ್ಳ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬೈರಪ್ಪ ಜಲಪಾತ, ಮಳೆಗಾಲದಲ್ಲಿ ಮಾತ್ರ ಜೀವ ಕಳೆ ಪಡೆಯುತ್ತದೆ.
ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಮೈದುಂಬಿ ಹರಿಯುತ್ತಿರುವ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಅರೇಮಲೆನಾಡು ಪ್ರದೇಶವಾಗಿರೋ ಕಲಘಟಗಿ, ರಮಣೀಯ ಪ್ರಕೃತಿ ಸೊಬಗನ್ನು ಹೊಂದಿದೆ. ಕಲಘಟಗಿ ತಾಲೂಕಿನಲ್ಲಿ ಚಿಕ್ಕ-ಚಿಕ್ಕ ಜಲಪಾತಗಳಿಗೂ ಜೀವಕಳೆ ಬಂದಿದೆ. ಈ ಪೈಕಿ ಭೈರಪ್ಪ ಫಾಲ್ಸ್ ಗಮನ ಸೆಳೆಯುತ್ತಿದೆ.
ಈ ಪ್ರದೇಶದಲ್ಲಿ ಭೈರಪ್ಪ ಗುಹೆ ಹಾಗೂ ಭೈರಪ್ಪ ದೇವರು ಗುಡಿ ಕೂಡ ಇದೆ. ಹೀಗಾಗಿ ಈ ಭೈರಪ್ಪ ಫಾಲ್ಸ್, ಭೈರಪ್ಪ ಕೊಳ್ಳ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
Shivaraj : ಗಡಿಭಾಗದ, ಗಡಿ ಹೊರಗಿನ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಶಿವರಾಜ್ ತಂಗಡಗಿ