- Advertisement -
ಆಗಸ್ಟ್ ಬಂತು ಅಂದ್ರೆ ಅದು ದೇಶದ ಜನರಿಗೆ ಒಂದು ಸಂಭ್ರಮದ ತಿಂಗಳೇ ಸರಿ ದೇಶದ ಜನರು ಸ್ವಾತಂತ್ರ್ಯ ದಿನವನ್ನ ಅದ್ದೂರಿಯಾಗಿ ಆಚರಿಸಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗ್’ ಅಭಿಯಾನಕ್ಕೆ ಬಿಬಿಎಂಪಿ ಕೂಡ ಕೈ ಜೋಡಿಸಲು ಸಜ್ಜಾಗಿದೆ.ಬಳ್ಳಾರಿಯಲ್ಲೂ ತಿರಂಗ ಹಾರಾಡಿದೆ
ಭಾರತದೆಲ್ಲೆಡೆ ಹರ್ ಘರ್ ತಿರಂಗ್ ಅಭಿಯಾನ ಸದ್ದು ಮಾಡುತ್ತಿದೆ. ಭಾರತೀಯರು ತನ್ನ ಮನೆಯಲ್ಲಿ ಇಂದಿನಿಂದಲೇ ಧ್ವಜವನ್ನು ಹಾರಿಸಿ ದೇಶ ಪ್ರೇಮವನ್ನು ಸಾರುತ್ತಿದ್ದಾರೆ. ಗಣಿ ನಗರಿ ಬಳ್ಳಾರಿಯಲ್ಲೂ ಹರ್ ಘರ್ ತಿರಂಗಾಕ್ಕೆ ಚಾಲನೆ ದೊರೆಯಿತು. ಮೋತಿ ವೃತ್ತದಲ್ಲಿರುವ 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ತಿರಂಗವು ಬಾನೆತ್ತರಕ್ಕೆ ಹಾರಾಡಿದೆ. ಈ ಸಂದರ್ಭ 12000 ವಿಧ್ಯಾರ್ಥಿಗಳು ದೇಶ ಪ್ರೇಮಕ್ಕೆ ಸಾಕ್ಷಿಯಾದರು.
- Advertisement -