Ballari News:
ಬಳ್ಳಾರಿ ಉತ್ಸವ ಬಹಳ ಅದ್ದೂರಿಯಾಗಿ ನಡೆಯಿತು.ಅನೇಕ ರೀತಿಯ ವಸ್ತು ಪ್ರದರ್ಶನ, ಪುಷ್ಪ ಪ್ರದರ್ಶನ ಮನಸೂರೆಗೊಳ್ಳುವಂತಿತ್ತು.ಅದರ ಜೊತೆಗೆ ಗಣಿನಗರಿ ಬಳ್ಳಾರಿಯ ಐತಿಹಾಸಿಕ ಸ್ಮಾರಕಗಳು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮರಳು ಶಿಲ್ಪಿಗಳ ಕೈಚಳಕದಲ್ಲಿ ಅರಳಿ ನಿಂತಿವೆ. ಹೌದು. ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವದಲ್ಲಿ ನಗರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಮೂಡಿ ಬಂದಿರುವ ಮರಳು ಶಿಲ್ಪಕಲೆಗಳು ಹೊಸ ಮೆರುಗು ನೀಡಿದವು. ಮುಂಬೈನಿಂದ ಆಗಮಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿ ಕಲಾವಿದರಾದ ನಾರಾಯಣ್ ಸಾಹು, ಓಂ ಪ್ರಕಾಶ್ ಬಾರಿಕ್, ಮುರುಳೀಧರ್ ದಾಸ್, ಶ್ವೇತ ಜಾಜು ಎಂಬುವರು ಮರಳು ಶಿಲ್ಪಗಳನ್ನು ರಚಿಸಿದರು ಇದು ಜನರ ಮನಸೂರೆಗೊಳಿಸುವಂತಿತ್ತು.
“ಗಣರಾಜ್ಯೋತ್ಸವ ಆಚರಣೆ ಈದ್ಗಾ ಮೈದಾನಮದಲ್ಲಿ ಮಾಡೇ ಮಾಡ್ತೀವಿ”: ನಾಗರಿಕರ ಒಕ್ಕೂಟ
“ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಒಂದು ವಿಶಿಷ್ಠ ಕಾರ್ಯಕ್ರಮ: ಸುರೇಶ್ ಗೌಡ