- Advertisement -
Banglore News:
ಸಿಲಿಕಾನ್ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದಿದೆ. ಲಾರಿಯೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿದೆ. ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನನ್ನು ಖಾಸಗಿ ಉದ್ಯೋಗಿ ಸುಮನ್ ಎಂದು ಗುರುತಿಸಲಾಗಿದೆ. ಸುಮನ್ ಬೈಕಿನಲ್ಲಿ ಪೆಟ್ರೋಲ್ ಖಾಲಿಯಾಗಿತ್ತು. ಹೀಗಾಗಿ ಆತ ಶೆಲ್ ಪೆಟ್ರೊಲ್ ಬಂಕ್ನಿಂದ ಬಾಟ್ಲಿಯಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಒನ್ ವೇಯಲ್ಲಿ ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಬಂದ ಎಪಿ ೦೪ ಯುಬಿ ೧೧೮೯ ನಂಬರ್ ನ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಅಶೋಕ್ ಲೈಲಾಂಡ್ ಲಾರಿ ಕೆಳಗೆ ಸಿಲುಕಿಕೊಂಡು ಉಜ್ಜಿಕೊಂಡು ಹೋಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ..? ಮತ್ತೆ ಅಧ್ಯಕ್ಷರಾಗ್ತಾರಾ ಡಿ.ಕೆ.ಶಿ..?!
- Advertisement -