ಬೆಂಗಳೂರು:ಸ್ವಾತಂತ್ರೋತ್ಸವ ಹಿನ್ನಲೆ ಉಚಿತ ಬಸ್ ಪ್ರಯಾಣ

Banglore:

ನಾಡಿನೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ತಿರಂಗದ ರಂಗು ಕಳೆಗಟ್ಟಿದೆ. ಹಾಗೆಯೇ ಸರಕಾರವು ಜನರಿಗಾಗಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅನೇಕ ಆಯೋಜನೆಗಳನ್ನು ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ BMTC  ಬಸ್ ಗಳು ಇಂದು ಸಂಪೂರ್ಣ ಉಚಿತವಾಗಿದೆ. ಉಚಿತ ಬಸ್ ಪ್ರಯಾಣದ ಕಾರಣದಿಂದಲೇ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಜನಸಾಗರವೇ ತುಂಬಿದೆ. ಇಂದು ಬಸ್ ನಲ್ಲಿ ಎಲ್ಲಿಂದ ಎಲ್ಲಿಯವರೆಗೂ ಜನರು ಸಂಚರಿಸಬಹುದಾಗಿದೆ.

ಹಾಗೆಯೇ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವ ನಡಿಗೆ ಇರುವ ಕಾರಣದಿಂದಾಗಿ ಜನ ಜಮಾವನೆ ಹೆಚ್ಚಿದೆ ಎನ್ನಲಾಗುತ್ತಿದೆ.ಮತ್ತು ಜನರ ಜಾಗೃತೆ ಬಗ್ಗೆಯೂ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

About The Author