ಸಿಎಂ ಇರುವಾಗಲೇ ಸಿದ್ದರಾಮಯ್ಯಗೆ ಜಯಘೋಷ ಕೂಗಿದ ಜನ

ಬೆಂಗಳೂರು:

ಸ್ವಾತಂತ್ರ್ಯದ ಸುದಿನದಂದು ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಾಚರಿಸಲಾಗುತ್ತದೆ. ಹಾಗೆಯೇ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಂಗೊಳ್ಳಿ ರಾಯಣ್ಣವನರಿಗೆ ಪುಷ್ಪಾರ್ಚನೆ ಮಾಡುವಂತಹ ಸಂದರ್ಭದಲ್ಲಿ ಜನರು ಸಿದ್ದು ಪರ ಘೋಷಣೆ ಕೂಗಿದ ವಿಚಾರ ನಡೆದಿದೆ.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜನ್ಮದಿನ ಆಚರಿಸುವ ಸಂದರ್ಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪುಷ್ಪಾರ್ಚನೆ ಮಾಡುತ್ತಿದ್ದರು ಈ ಸಂದರ್ಭ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ನಮಿಸಿ ನಂತರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತೆರಳುವಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ತೆರಳಿದ ನಂತರವೂ ಜನರು ಸಿದ್ದು ಪರ ಜೈಕಾರ ಕೂಗಿದರು. ಸಿಎಂ ಇರುವಾಗಲೇ ಸಿದ್ದುಪರ ಘೋಷಣೆ ಕೂಗಿದ್ದು ಕೊಂಚ ಮುಜುಗರದ ವಾತಾವರಣ ಸೃಷ್ಟಿಯಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ

About The Author