Friday, August 29, 2025

Latest Posts

ವೃದ್ಧ ದಂಪತಿ ಮನೆಗೆ ಬೀಗ ಹಾಕಿದ ಬ್ಯಾಂಕ್ – ವೃದ್ಧರ ಕಣ್ಣೀರಿನ ಕತೆ!

- Advertisement -

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳಾಗಟ್ಟಿ ಗ್ರಾಮದಲ್ಲಿ ಮಾನವೀಯತೆ ಮೆರೆವಂತಹ ದುರಂತ ಎದುರಾಗಿದೆ. ವಯೋವೃದ್ಧ ದಂಪತಿಯನ್ನ ಸಹಿತವಾಗಿ ಮಾನಸಿಕ ಅಸ್ವಸ್ಥ ಮಗನನ್ನೂ ಮನೆಗೆ ಹೊರಗೆ ಹಾಕಿ, ಸ್ಥಳೀಯ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬೀಗ ಹಾಕಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

60 ವರ್ಷದ ಸಹಾದೇವಪ್ಪ ಕೊಳೂರು ಕಳೆದ ಎರಡು ವರ್ಷಗಳ ಹಿಂದೆ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಗೃಹಸಾಲ ತೆಗೆದುಕೊಂಡಿದ್ದರು. ಮನೆ ನವೀಕರಣ ಹಾಗೂ ಮಗಳ ಮದುವೆಗಾಗಿ ಸಾಲ ಮಾಡಿಕೊಂಡಿದ್ದ ಈ ದಂಪತಿ, ಶ್ರದ್ಧೆಯಿಂದ ಒಂದೂವರೆ ವರ್ಷ ಸಾಲದ ಕಂತುಗಳನ್ನು ಕಟ್ಟಿದ್ದರು. ಆದರೆ ಅನಾರೋಗ್ಯ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸಹಾದೇವಪ್ಪ ಅವರು ಕೆಲಸ ಮಾಡಲಾಗದೆ ಬಿದ್ದಿದ್ದರಿಂದ, ಕಳೆದ ಆರು ತಿಂಗಳಿನಿಂದ ಸಾಲದ ಕಂತು ಪಾವತಿಯಾಗಿಲ್ಲ.

ಅವರ ಪತ್ನಿ ಗಿರೀಜವ್ವ ಮನೆಯ ಕೆಲಸಗಳ ಮೂಲಕ ಕುಟುಂಬ ನಡೆಸುತ್ತಿದ್ದರು. ಮನೆಯಲ್ಲಿ ಮಾನಸಿಕ ಅಸ್ವಸ್ಥ ಮಗನ ಜವಾಬ್ದಾರಿ ಕೂಡ ಅವರ ಮೇಲೇ ಇತ್ತು. ಈ ಮಧ್ಯೆ, ಸಹಾದೇವಪ್ಪ ಕಟ್ಟಡ ಕಾಮಗಾರಿಯ ವೇಳೆ ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದರು.

ಅವನಿಂದ ಇನ್ನು ಮುಂದೆ ದುಡಿಯಲು ಸಾಧ್ಯವಿಲ್ಲದಂತಾಗಿರುವ ಈ ಸಂದರ್ಭ, ಬ್ಯಾಂಕ್ ಯಾವುದೇ ಅಧಿಕೃತ ನೋಟಿಸ್ ನೀಡದೆ ನೇರವಾಗಿ ಮನೆಗೆ ಬಂದು, ಕುಟುಂಬದ ಸದಸ್ಯರನ್ನು ಹೊರಗೆ ಹಾಕಿ ಬೀಗ ಹಾಕಿದ ಶಾಕ್‌ಘಟನೆಯು ನಡೆದಿದೆ.

ಈ ಅನಾಹುತದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಂಪೂರ್ಣ ಮಾನವೀಯತೆ ಕಳೆದುಬಿಟ್ಟಿರುವ ಕ್ರಮ ಎಂದು ಖಂಡಿಸಿದ್ದಾರೆ. ಯಾವುದೇ ಎಚ್ಚರಿಕೆ ಅಥವಾ ನೋಟಿಸ್ ಇಲ್ಲದೆ ಕುಟುಂಬವೊಂದನ್ನು ರಸ್ತೆಗೆ ತಳ್ಳಿರುವ ಬ್ಯಾಂಕ್ ಕ್ರಮವನ್ನು ವಿರೋಧಿಸುತ್ತಿದ್ದಾರೆ.

- Advertisement -

Latest Posts

Don't Miss