Sunday, October 27, 2024

Latest Posts

ಶಿಗ್ಗಾವಿಯಲ್ಲಿ ಕಾಂಗ್ರೆಸ್‌ಗೆ ಬಿಗ್‌ ಶಾಕ್: ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ

- Advertisement -

Haveri News: ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ್ದು, ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಈ ಬಾರಿ ಕಾಂಗ್ರೆಸ್‌ನಿಂದ ಅಜ್ಜಂಪೀರ್ ಅವರಿಗೆ ಟಿಕೇಟ್ ನೀಡುತ್ತಾರೆಂದು ಹೇಳಲಾಗಿತ್ತು. ಆದರೆ ಅಜ್ಜಂಪೀರ್‌ಗೆ ಟಿಕೇಟ್ ಕೈ ತಪ್ಪಿದ್ದು, ಯಾಸಿರ್ ಅಹಮದ್ ಖಾನ್ ಪಠಾಣ್‌ಗೆ ಟಿಕೇಟ್ ನೀಡಲಾಯಿತು. ಹೀಗಾಗಿ ಜಮೀರ್ ಅಹಮದ್, ಅಜ್ಜಂಪೀರ್ ಅವರ ಮನವೊಲಿಸಿದ್ದರು.

ಆದರೂ ಅಜ್ಜಂಪೀರ್ ಇಂದು ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದು, ಖಾದ್ರಿ ಪರವಾಗಿ ಅವರ ಬೆಂಬಲಿಗರು ನಾಮಪತ್ರ ಸಲ್ಲಿಸಿದ್ದಾರೆ. ಶಿಗ್ಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಖಾದ್ರಿ ಬೆಂಬಲಿಗರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇನ್ನು ಹುಬ್ಬಳ್ಳಿಗೆ ಭೇಟಿ ಕೊಟ್ಟಿರುವ ಸಚಿವ ಜಮೀರ್ ಅಹಮದ್ ಖಾದ್ರಿ ಮನೆಗೆ ಭೇಟಿ ನೀಡಿ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕೂಡ, ಖಾದ್ರಿ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಮೂಲಕ ಶಿಗ್ಗಾವಿ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿದೆ. ನಾಮಪತ್ರ ಸಲ್ಲಿಸಲು ತಡವಾದ ಕಾರಣ, ಖಾದ್ರಿ ಬೈಕ್ ರ್ಯಾಲಿ ಮೂಲಕ, ಬಂದು, ನಾಮಪತ್ರ ಸಲ್ಲಿಕೆಗೆ 13 ನಿಮಿಷ ಇರುವಾಗ, ನಾಮಪತ್ರ ಸಲ್ಲಿಸಿದ್ದಾರೆ.

- Advertisement -

Latest Posts

Don't Miss