Thursday, June 19, 2025

Latest Posts

ಮಾಜಿ ಸಿಎಂ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟ ಎಸೆದ ಕೇಸ್ ಗೆ ಬಿಗ್ ಟ್ವಿಸ್ಟ್: ಮೊಟ್ಟೆ ಎಸೆದಿದ್ದು ಯಾರು ಗೊತ್ತಾ.?

- Advertisement -

ಮಡಿಕೇರಿ: ನಗರದಲ್ಲಿ ಸಿದ್ಧರಾಮಯ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದಂತ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಪಡೆದಿದೆ. ವಿಪಕ್ಷ ನಾಯಕರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಸ್ವತಹ ಕಾಂಗ್ರೆಸ್ ಕಾರ್ಯಕರ್ತ ಎಂಬುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಮೊಟ್ಟೆ ಎಸೆದಿದ್ದಂತ ಸಂಪತ್ ಎಂಬಾತನೇ ಪ್ರತಿಕ್ರಿಯಿಸಿದ್ದು, ಸಿದ್ಧರಾಮಯ್ಯ ಹೇಳಿಕೆಯಿಂದ ಸಿಟ್ಟು ಬಂದಿತ್ತು. ಅವರು ಹಿಂದೂಗಳ ಬಗ್ಗೆ ನೀಡಿದ್ದಂತ ಹೇಳಿಕೆಯಿಂದ ಸಿಟ್ಟಾಗಿಯೇ ಮೊಟ್ಟೆ ಎಸೆದೆ ಎಂದು ಹೇಳಿದ್ದಾನೆ.

ಕಾಂಗ್ರೆಸ್ ನಲ್ಲಿ ಹಿಂದೂಗಳಿಲ್ವಾ.? ಹಿಂದೂಗಳಲ್ಲಿಯೂ ದನದ ಮಾಂಸ ತಿನ್ನುತ್ತಾರೆ ಅಂತ ಅವರು ಹೇಳಿದ್ದಕ್ಕೆ ಸಿಟ್ಟು ಬಂದಿತ್ತು. ಇದೇ ಕೋಪದಲ್ಲಿಯೇ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರೋದಾಗಿ ತಿಳಿಸಿದ್ದಾನೆ.

ನಾನು ಮೊದಲು ಜೆಡಿಎಸ್ ಪಕ್ಷದಲ್ಲಿದ್ದೆ. ಇತ್ತೀಚಿಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದೆ. ಈ ವೇಳೆಯಲ್ಲಿಯೇ ಹಿಂದೂ ಧರ್ಮದ ಬಗ್ಗೆ ಸಿದ್ಧರಾಮಯ್ಯ ಹೇಳಿಕೆಯಿಂದ ಸಿಟ್ಟು ಬಂದಿತ್ತು. ಮೊದರು ಧರ್ಮ, ಆನಂತ್ರ ಪಕ್ಷ ಎಂದು ಹೇಳಿದ್ದಾರೆ.

- Advertisement -

Latest Posts

Don't Miss