Thursday, June 19, 2025

Latest Posts

BJP: ನಾ ಚಾಡಿಕೋರನಲ್ಲ – ಯತ್ನಾಳ್ ಕಂಪ್ಲಿಯಲ್ಲಿ 2ನೇ ರೌಂಡ್ ಹೋರಾಟ

- Advertisement -

ನಾವು ಚಾಡಿಕೋರರಲ್ಲ. ಹೈಕಮಾಂಡ್‌ಗೆ ದೂರು ನೀಡುವವರು ನಾವಲ್ಲ’ ಅಂತ ಬಿಜೆಪಿಯ ಅತೃಪ್ತ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ ಟಾಂಗ್ ನೀಡಿದ್ದಾರೆ. ಯತ್ನಾಳ್ ಈ ಮಾತನ್ನಾಡೋ ಮೂಲಕ ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ. ಖುದ್ದು ವಿಜಯೇಂದ್ರ ಅವರೇ ಬಂದು ನನ್ನನ್ನು ಮಾತನಾಡಿಸಿದರೂ ಮಾತನಾಡುವುದಿಲ್ಲ ಅಂತ ತೀಕ್ಷ್ಮವಾಗಿ ಹೇಳಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿ, ಯಾರ ಬಗ್ಗೆಯೂ ದೂರು ನೀಡದಿರುವುದಕ್ಕೆ ಹೈಕಮಾಂಡ್ ನಾಯಕರು ನನ್ನ ಬಗ್ಗೆ ಖುಷಿಪಟ್ಟು ಗ್ರೇಟ್ ಎನ್ನುತ್ತಾರೆ. ಯತ್ನಾಳ್ ಎಂದಿಗೂ ದೂರು ಹೇಳಲ್ಲ ಎನ್ನುತ್ತಾರೆ. ನಾವು ಪಕ್ಷಕ್ಕೆ ಮತಗಳನ್ನು ತರುವವರು. ನಾವು ಯಾಕೆ, ಯಾರಿಗೆ ದೂರು ಹೇಳೋಣ? ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಆದರೂ ಇರಲಿ ಅಥವಾ ಬೇರೆ ಯಾರೇ ಇರಲಿ. ನಾವು ಪಕ್ಷದ ಪರ ಮಾತ್ರ ಕೆಲಸ ಮಾಡುತ್ತೇವೆ ಎಂದರು. ಒಂದು ವೇಳೆ ಹೈಕಮಾಂಡ್ ನನ್ನನ್ನು ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ. ನಾನು ಯಾರ ಮೇಲೂ ದೂರು ಕೊಡುವುದಿಲ್ಲವಾದ್ದರಿಂದ ಹೈಕಮಾಂಡ್ ನನ್ನನ್ನು ಕರೆಯುವುದಿಲ್ಲ ಎಂದರು.

ವಕ್ಫ್‌ ಆಸ್ತಿ ವಿವಾದ ಕುರಿತ ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದ ಯತ್ನಾಳ, ಎರಡನೇ ಹಂತದ ಹೋರಾಟ ಸಂಬಂಧ ಶುಕ್ರವಾರ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ವಕ್ಫ್‌ ವಿರೋಧಿ ಹೋರಾಟದ ಮಹತ್ವವನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗುವುದು. ಮುಂದಿನ ದಿನದಲ್ಲಿ ಸಭಾಧ್ಯಕ್ಷರ ಪೀಠದ ಮೇಲೆ ಮೌಲ್ವಿಗಳು ಬಂದು ಕುಳಿತುಕೊಳ್ಳುತ್ತಾರೆ. ಹಿಂದೂಗಳಿಗೆ, ರೈತರಿಗೆ ಅನ್ಯಾಯವಾಗಿದೆ. ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

- Advertisement -

Latest Posts

Don't Miss