- Advertisement -
Bengaluru News: ಬಾಲಿವುಡ್ ಸಿಂಗರ್ ಲಕ್ಕಿ ಅಲಿಗೆ ಸೇರಿದ ಬೆಂಗಳೂರಿನ ಭೂಮಿಯೊಂದನ್ನು ಭೂ ಮಾಫಿಯಾ ಆರೋಪದಡಿ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಯಲಹಂಕ ನ್ಯೂಟೌನ್ ಬಳಿ ಇರುವ ಜಮೀನನ್ನು ರೋಹಿಣಿ ಸಿಂಧೂರಿ, ಒತ್ತುವರಿ ಮಾಡಿದ ಆರೋಪವಿದ್ದು, ರೋಹಿಣಿ, ಪತಿ ಸುಧೀರ್ ರೆಡ್ಡಿ, ಬಾಮೈದ ಮಮಧುಸೂದನ್ ರೆಡ್ಡಿ ವಿರುದ್ಧ ದೂರು ದಾಖಲು ಮಾಡಲಾಗಿದೆ.
2022ರಲ್ಲೇ ಲಕ್ಕಿ ಅಲಿ ಈ ಬಗ್ಗೆ ದೂರು ನೀಡಿದ್ದರು. ಇದೀಗ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ, ಪೋಸ್ಟ್ ಮಾಡಿದ್ದಾರೆ. 2012ರಿಂದಲೇ ಈ ಸ್ಥಳದ ಸಲುವಾಗಿ ವ್ಯಾಜ್ಯ ನಡೆಯುತ್ತಿದ್ದು, ಹಳೆಯ ಪೊಲೀಸ್ ಅಧಿಕಾರಿಗಳೆಲ್ಲ ರೋಹಿಣಿ ಪರವಾಗಿಯೇ ಇದ್ದಾರೆ. ಇಂದಿನವರೆಗೂ ಈ ಸಮಸ್ಯೆ ಬಗೆಹರಿದಿಲ್ಲವೆಂದು ಲಕ್ಕಿ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ.
- Advertisement -