Breaking News: ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಗುರುಪ್ರಸಾದ್ ಸಾ*ವಿಗೆ ಶರಣು..?

Sandalwood News: ಸ್ಯಾಂಡಲ್‌ವುಡ್ ನಿರ್ದೇಶ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 52 ವರ್ಷ ವಯಸ್ಸಿನ ಗುರುಪ್ರಸಾದ್, ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಕಾರಣ ಏನೆಂದು ಸ್ಪಷ್ಟವಾಗಿ ತಿಳಿದು ಬರದಿದ್ದರೂ, ಗುರುಪ್ರಸಾದ್ ಸಾಲಗಾರರಿಗೆ ಹೆದರಿ ನೇಣಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಇತ್ತೀಚೆಗೆ ಡೈರೆಕ್ಟ್ ಮಾಡಿದ್ದ ರಂಗನಾಯಕ ಸಿನಿಮಾ ಫ್ಲಾಪ್ ಆಗಿತ್ತು. ಹಾಕಿದ್ದ ಬಂಡವಾಳಕ್ಕೆ ತಕ್ಕಂತೆ, ಲಾಭ ಬಂದಿರಲಿಲ್ಲ. ಹಾಗಾಗಿ ಸಿನಿಮಾಗಾಗಿ ಮಾಡಿದ್ದ ಸಾಲ ತೀರಿಸಲು ಗುರುಪ್ರಸಾದ್ ಕಷ್ಟಪಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಆಗಿದ್ದರು. ಆದರೆ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದರು. ಕೌಟುಂಬಿಕ ಕಲಹ ಕಾರಣಕ್ಕೋ, ಸಾಲಬಾಧೆಗೋ ಹೆದರಿ ಗುರುಪ್ರಸಾದ್ ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದೆ.

ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣಕ್ಕೆ, ಅಕ್ಕ ಪಕ್ಕದ ಮನೆಯವರು ಕಿಟಕಿಯಿಂದ ನೋಡಿದಾಗ, ಗುರುಪ್ರಸಾದ್ ನೇಣು ಹಾಕಿಕೊಂಡಿದ್ದು ಕಂಡುಬಂದಿದೆ. ಬಳಿಕ ಸ್ಥಳೀಯರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಗುರುಪ್ರಸಾದ್‌ ಮಠ ಅನ್ನೋ ಸಿನಿಮಾ ನಿರ್ದೇಶನ ಮಾಡಿದ ಬಳಿಕ, ಸ್ಯಾಂಡಲ್‌ವುಡಲ್ಲಿ ಸಖತ್ ಫೇಮಸ್ ಆಗಿದ್ರು. ನನ್ನನ್ನು ಪ್ರಶ್ನಿಸುವವರು ಎದುರಿಗೆ ಬನ್ನಿ ಉತ್ತರಿಸುತ್ತೇನೆ ಎಂದು ಗುರುಪ್ರಸಾದ್ ಚಾಲೆಂಜ್ ಮಾಡಿದ್ರು. ಬಿಗ್‌ಬಾಸ್ ಸೀಸನ್ 2ನಲ್ಲಿಯೂ ಗುರುಪ್ರಸಾದ್ ಸ್ಪರ್ಧಿಸಿದ್ದರು. ಇದರೊಂದಿಗೆ ನಟನೆಯಲ್ಲಿಯೂ ಗುರುಪ್ರಸಾದ್ ತೊಡಗಿಸಿಕೊಂಡಿದ್ದರು. ಆದರೆ ಗುರುಪ್ರಸಾದ್‌ ಯಾರ ಮಾತೂ ಕೇಳುತ್ತಿರಲಿಲ್ಲ. ಮದ್ಯಪಾನ ಸೇವನೆ ಹೆಚ್ಚು ಮಾಡುತ್ತಿದ್ದರು ಎಂದು ಗುರುಪ್ರಸಾದ್ ಆಪ್ತರು ಹೇಳುತ್ತಾರೆ.

About The Author