Thursday, August 21, 2025

Latest Posts

ರೈತರ ಮೇಲೆ ಗೋಲಿಬಾರ್ ಖಂಡನೀಯ: ಸರ್ಕಿಟ್ ಹೌಸ್ ನಲ್ಲಿ ರೈತರ ಪ್ರತಿಭಟನೆ..!

- Advertisement -

Hubli News: ಹುಬ್ಬಳ್ಳಿ: ಹರಿಯಾಣದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿರುವುದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಸಂಯುಕ್ತ ರೈತ ಸಂಘಟನೆ ಹಾಗೂ ಮಹದಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಹುಬ್ಬಳ್ಳಿಯ ಸರ್ಕಿಟ್ ಹೌಸ್ ನಲ್ಲಿ ಮಹದಾಯಿ ಸಭೆಯ ವೇಳೆಯಲ್ಲಿ ರೈತರು, ಹರಿಯಾಣ ರಾಜ್ಯದಲ್ಲಿ ರೈತರ ಮೇಲೆ ಪೊಲೀಸರ ದೌರ್ಜನ್ಯ ಖಂಡನೀಯವಾಗಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ದೇಶದ ಅನ್ನದಾತ ರೈತನ ಮೇಲೆ‌ ಗೋಲಿಬಾರ್ ಮಾಡಿರುವುದು ಎಷ್ಟರಮಟ್ಟಿಗೆ ಸರಿ..? ನಮಗೆ ಯಾವುದೇ ರಾಷ್ಟ್ರಪತಿ ಪ್ರಶಸ್ತಿ ಬೇಡ. ರೈತರ ಮೇಲೆ ಗೋಲಿಬಾರ್ ಮಾಡಿರುವವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest Posts

Don't Miss