State News:
Feb:28: ಸರಕಾರಕ್ಕೆ ಇದೀಗ ಬಂಟರ ಅಸಮಾಧಾನ ಕಂಟಕವಾಗಿ ಪರಿಣಮಿಸುವಂತಿದೆ.ಹೌದು ರಾಜ್ಯ ಬಿಜೆಪಿಗೆ ಬಂಟರ ಅಸಮಾಧಾನ ಕಂಟಕವಾಗಿ ಪರಿಣಮಿಸಿದೆ. ಬಿಲ್ಲವರಿಗೆ ನಿಗಮ ಘೋಷಣೆಯಾದ ಬೆನ್ನಲೇ, ಸರ್ಕಾರದ ವಿರುದ್ಧ ಬಂಟರು ಸಮರ ಸಾರಿದ್ದಾರೆ. ಬಿಲ್ಲವರಿಗೆ ನಿಗಮ ಘೋಷಣೆ ಆದ್ರೆ, ಬಂಟವರಿಗೆ ಮಾತ್ರ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಬಂಟರು. ಪ್ರತ್ಯೇಕ ನಿಗಮ ಹಾಗೂ 3ಬಿಯಿಂದ 2ಎಗೆ ಮೀಸಲಾತಿಗೆ ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಉತ್ತರದ ಎಚ್ಚರಿಕೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗಳನ್ನು ಸೋಲಿಸೋ ಸಾಮರ್ಥ್ಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಕರಾವಳಿಯಲ್ಲಿ ಮತ್ತೊಂದು ಪ್ರಬಲ ಸಮುದಾಯವಾಗಿರೋ ಬಂಟರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 3.5 ಲಕ್ಷ ಬಂಟ ಮತದಾರರು ಇದ್ದಾರೆ ಎನ್ನಲಾಗಿದೆ.
ಪ್ರತಿಭಟನೆಗೆ ಮುಂದಾಗಬಾರದು , ಸರಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಮನವಿ
ನಾಳೆ ಸರ್ಕಾರಿ ಸೇವೆ ಬಂದ್..!? ಏನೇನಿರಲಿದೆ ಏನೆಲ್ಲಾ ವ್ಯತ್ಯಯವಾಗಲಿದೆ..!?