Friday, October 18, 2024

Latest Posts

ಬೀಗರಾಗಲಿದ್ದಾರೆ ಭೈರತಿ ಸುರೇಶ್​, ಎಸ್​. ಆರ್​. ವಿಶ್ವನಾಥ್​

- Advertisement -

ಬೆಂಗಳೂರು: ಕಾಂಗ್ರೆಸ್‌ ನಾಯಕ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹಾಗೂ ಬಿಜೆಪಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್‌ ಈಗ ಬೀಗರುಗಳಾಗುತ್ತಿದ್ದಾರೆ. ಎಸ್.ಆರ್. ವಿಶ್ವನಾಥ್‌ ಮಗಳನ್ನು ಭೈರತಿ ಸುರೇಶ್‌ ಪುತ್ರ ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ವಿರೋಧಿ ಪಡೆಯ ನಾಯಕರು ಈಗ ನೆಂಟರಾಗುತ್ತಿದ್ದಾರೆ.

ಹೌದು ಸಚಿವ ಬೈರತಿ ಸುರೇಶ್ ಅವ್ರ ಪುತ್ರ ಸಂಜಯ್ ಹಾಗೂ ಶಾಸಕ ಎಸ್​. ಆರ್​ ವಿಶ್ವನಾಥ್ ಅವ್ರ ಪುತ್ರಿ ಅಪೂರ್ವ ಇಬ್ಬರು ಕಾಲೇಜ್ ಸ್ನೇಹಿತರಾಗಿದ್ದರು. ಸಂಜಯ್‌ ಹಾಗೂ ಅಪೂರ್ವ ಇಬ್ಬರು ಮಲ್ಲೇಶ್ವರಂನ ವಿದ್ಯಾಮಂದಿರದಲ್ಲಿ ಶಿಕ್ಷಣ ಪಡೆದಿದ್ದಾರೆ. ಆ ಕಾಲೇಜು ದಿನಗಳ ಸಮಯದಲ್ಲೇ ಉತ್ತಮ ಸ್ನೇಹ, ಪ್ರೀತಿ ಇತ್ತು ಎಂದು ತಿಳಿದು ಬಂದಿದೆ.

ಇಬ್ಬರ ಪ್ರೀತಿಗೆ ಎರಡೂ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದ್ದು. ಶುಕ್ರವಾರ ಅಂತಿಮ ಹಂತದ ಮದುವೆ ಮಾತುಕತೆ ನಡೆಸಿದ್ದಾರೆ. ಶಾಸಕ ಎಸ್​ ಆರ್ ವಿಶ್ವನಾಥ್‌ ಮನೆಗೆ ಭೈರತಿ ಸುರೇಶ್‌ ಕುಟುಂಬ ತೆರಳಿ ಮದುವೆ ಮಾತುಕತೆ ನಡೆಸಿದ್ದಾರೆ.

ಹೀಗಾಗಿ ಸದ್ಯದಲ್ಲೇ ಭೈರತಿ ಸುರೇಶ್ ಹಾಗೂ ಎಸ್.ಆರ್.ವಿಶ್ವನಾಥ್‌ ಬೀಗರುಗಳಾಗಲಿದ್ದಾರೆ.

- Advertisement -

Latest Posts

Don't Miss