Banglore News:
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕೇಸರಿ ಫೌಂಡೇಶನ್ ವತಿಯಿಂದ ಬಿಜೆಪಿ ಮುಖಂಡರಾದಶ್ರೀ ತಮ್ಮೇಶ್ ಗೌಡರ ನೇತೃತ್ವದಲ್ಲಿ ಬ್ಯಾಟರಾಯನಪುರ ಶ್ರೀನಿವಾಸ ಕಲ್ಯಾಣೋತ್ಸವವು ೨೨ನೇ ಜನವರಿ ೨೦೨೩ ರಂದು ಅತ್ಯಂತ್ತ ಅದ್ದೂರಿಯಾಗಿ ನಡೆಯಿತು.ಬ್ಯಾಟರಾಯನಪುರ ವಾರ್ಡ್ ನಲ್ಲಿರುವ, ಅಂತರಾಷ್ಟಿçಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ತಿರುಮಲ ತಿರುಪತಿ ದೇವಸ್ಥಾನದ ರೀತಿಯಲ್ಲೇ ಅತ್ಯಂತ್ತ ವೈಭವವಾಗಿ ನಿರ್ಮಿಸಿದ ವೇದಿಕೆಯಲ್ಲಿ ಈ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ತಿರುಮಲ ತಿರುಪತಿ ದೇವಾಲಯದ ಲಡ್ಡು ಪ್ರಸಾದ ಮತ್ತು ಕ್ಯಾಲೆಂಡರನ್ನು ನೀಡಲಾಯಿತು ಹಾಗೂ ಬಂದAತ್ತಹ ಎಲ್ಲಾ ಭಕ್ತರಿಗೂ ಊಟದ ವ್ಯವಸ್ಥೆ ಸಹ ಮಾಡಿಸಲಾಗಿತ್ತು ತಿರುಮಲ ತಿರುಪತಿ ದೇವಾಲಯದ ಆಸ್ಥಾನ ಗಾಯಕರಾದ ಶ್ರೀ ಕೃಷ್ಣ ರವರಿಂದ ಸಂಗೀತೋತ್ಸವದಿAದ ಕಾರ್ಯಕ್ರಮ ಪ್ರಾರಂಭವಾಯಿತು, ಶ್ರೀ ವೆಂಕಟೇಶ್ವರ ಸ್ವಾಮಿಯ ಕೀರ್ತನೆಗಳನ್ನು ಅತ್ಯಂತ್ತ
ಮಧುರವಾಗಿ ಹಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀಶ್ರೀಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು,
ಶ್ರೀ ಸ್ಪಟಿಕಾಪುರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ನಂಜಾವದೂತ ಮಹಾಸ್ವಾಮಿಗಳು, ಶ್ರೀ ಶ್ರೀ ಶ್ರೀ ವಚನಾನಂದ ಮಹಾ ಸ್ವಾಮಿಜಿಗಳು, ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರು, ಕರ್ನಾಟಕ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪನವರು, ಮಾನ್ಯ ಉನ್ನತ ಶಿಕ್ಷಣ, ಐಟಿ ಬಿಟಿ ಮತ್ತುಮಾಹಿತಿ ತಂತ್ರಜ್ಞಾನ ಮಂತ್ರಿಗಳಾದ ಡಾ. ಸಿ ಎನ್
ಅಶ್ವತ್ನಾರಯಣ್, ಬಿಡಿಎ ಅಧ್ಯಕ್ಷರು, ಶಾಸಕರು ಆದ ಎಸ್ ಆರ್ ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದಂತಹ ಭಾರತಿ ಶೆಟ್ಟಿ ರವರು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್ ರವಿಕುಮಾರ್ ಮತ್ತು ಅನೇಕ ಬಿಜೆಪಿಯ ಮುಖಂಡರು ಪಾಲ್ಗೊಂಡಿದ್ದರು.ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸಿದ್ದಲಿಂಗಸ್ವಾಮಿಗಳು ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ಜಗತ್ಕಲ್ಯಾಣದ ಕಾರ್ಯವಾಗಿದ್ದು, ಎಲ್ಲಾ ಭಕ್ತರಿಗೂ ಭಗವಂತನ ಆಶೀರ್ವಾದ ಸಿಗಲಿ ಹಾಗೂ ಶ್ರೀ ತಮ್ಮೇಶ್ ಗೌಡರ ಸೇವೆ ಶ್ಲಾಘನೀಯವಾಗಿದೆ, ಅವರಿಗೂ ಭಗವಂತ ಇನ್ನಷ್ಟು ಶಕ್ತಿ ಕೊಟ್ಟು ಹೆಚ್ಚು ಜನಸೇವೆ ಮಾಡುವಂತ್ತಾಗಲಿ ಎಂದು ಹೇಳಿದರು. ಎಸ್ ಆರ್ ವಿಶ್ವನಾಥ್ ಮಾತನಾಡಿ ಬ್ಯಾಟರಾಯನಪುರದಲ್ಲಿ ತಮ್ಮೇಶ್ಗೌಡರು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ, ಅದೇ ರೀತಿ ಅನೇಕ ದಾರ್ಮಿಕ ಕೆಲಸಗಳನ್ನು ಮಾಡುತ್ತಿದ್ದಾರೆ, ಈ ಕಾರ್ಯಕ್ರಮಕ್ಕೆ ಸೇರಿರುವ ಈ ಜನ ಸಾಗರವನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ, ತಮ್ಮೇಶ್ ಗೌಡರು ಮುಂದಿನ ದಿನಗಳಲ್ಲಿ
ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ ಎಂದು ಹೇಳಿದರು. ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪನವರು ಶ್ರೀ ಶ್ರೀನಿವಾಸನ ಅನುಗ್ರಹ ಎಲ್ಲಾ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನರ ಮೇಲಿರಲಿ, ಶ್ರೀ ಶ್ರೀನಿವಾಸ ಕಲ್ಯಾಣದಲ್ಲಿ ಪಾಲ್ಗೊಳ್ಳಲು ಇಲ್ಲಿ ಸೇರಿರುವ ಲಕ್ಷಾಂತರ ಜನರು ಅದೃಷ್ಟವಂತರು. ತಮ್ಮೇಶ್ ಗೌಡರನ್ನು ಹಲವಾರು ವರ್ಷಗಳಿಂದ ಗಮನಿಸುತ್ತಿದ್ದೇನೆ, ಅವರು ಮಾಡುತ್ತಿರುವ ಜನಸೇವೆ ಅಸಾಮನ್ಯವಾದುದು. ಕೋವಿಡ್ ಸಮಯದಲ್ಲಿ ಅವರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾವಿರಾರು ಕುಟುಂಬಗಳ ನೆರವಿಗೆ ನಿಂತ್ತರು, ಅವರು ನಡೆಸುತ್ತಿರುವ ಆರೋಗ್ಯ ತಪಾಸಣ ಶಿಬಿರ ಹಾಗೂ ಉಚಿತ ಔಷದಿ ಶಿಬಿರಗಳಲ್ಲಿ ಸಾವಿರಾರು ಜನರು ಪಲಾನುಭಾವಿಗಳಾಗಿದ್ದರೆ, ಅದೇ ರೀತಿ ತಮ್ಮೇಶ್ ಗೌಡರು ಅನೇಕ ಧಾರ್ಮಿಕ ಕಾರ್ಯಕ್ರಮಗಳಾದ, ಆಷಾಡ ಅಷ್ಟಲಕ್ಷಿ÷್ಮ ಪೂಜೆ, ದುರ್ಗಾಷ್ಟಾಮಿ ಪೂಜೆ, ದಸರಾ ಉತ್ಸವಗಳನ್ನು ಅತ್ಯಂತ್ತ ವೈಭವದಿಂದ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮೇಶ್ ಗೌಡರು ವಿದ್ಯಾರ್ಥಿ ಯಾಗಿರುವಾಗಲೇ ಎಬಿವಿಪಿ ಸಂಘಟನೆಯಲ್ಲಿ ಅನೇಕ ಜವಾಬ್ಧಾರಿಗಳನ್ನು
ಯಶಸ್ವಿಯಾಗಿ ನಿರ್ವಹಿಸಿದ್ದರು, ನಮ್ಮ ಪಕ್ಷದಲ್ಲಿಯೂ ರಾಜ್ಯ ಯುವ ಮೋರ್ಚದ ಉಪಾಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಪಕ್ಷದ ಸಂಘಟನೆ ಮಾಡಿದಂತಹ ಒಬ್ಬ ಸಮರ್ಥ ನಾಯಕರಾಗಿದ್ದಾರೆ. ಈ ಶ್ರೀನಿವಾಸ ಕಲ್ಯಾಣೋತ್ಸವವನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನರ ಒಳಿತಿಗಾಗಿ ಈ ದಿನ ಇಷ್ಟೊಂದು ಅದ್ದೂರಿಯಾಗಿ ಆಯೋಜಿಸಿದ್ದಾರೆ, ದೇವರು ತಮ್ಮೇಶ್
ಗೌಡರಿಗೂ ಹಾಗೂ ಕ್ಷೇತ್ರದ ಎಲ್ಲಾ ನಾಗರೀಕರಿಗೂ ಸುಖ ಸಂತೋಷ ನೆಮ್ಮದಿಯ ಜೀವನವನ್ನು ಅನುಗ್ರಹಿಸಲಿ. ತಮ್ಮೇಶ್ ಗೌಡರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ನಿಮ್ಮೆಲ್ಲಾರ ಆಶೀರ್ವಾದ ತಮ್ಮೆಶ್ ಗೌಡರ ಮೇಲಿರಲಿ, ಆ ದೇವರು ಅವರಿಗೆ ಉನ್ನತ ಸ್ಥಾನ ಮಾನವನ್ನು ಕರುಣಿಸಲಿ ಎಂದು ಹೇಳಿದರು. ಈ ಕಾರ್ಯಕ್ರಮದ ರೂವಾರಿಗಳಾದಂತಹ ತಮ್ಮೇಶ್ ಗೌಡರು ಮಾತಾನಾಡಿ, ನನಗೆ ಯಾವಾಗಲೂ ಬಿ ಎಸ್ ಯಡಿಯೂರಪ್ಪನವರು ಸ್ಪೂರ್ತಿದಾಯಕರಾಗಿದ್ದಾರೆ. ಕೋವಿಡ್ ಸಮಯದಲ್ಲಿ ಅವರಿಗೆ ಕೋವಿಡ್ ಬಂದಿದ್ದರೂ ದಿನ ನಿತ್ಯ ಕೆಲಸಮಾಡಿ ನಮ್ಮ ರಾಜ್ಯವನ್ನು ಕಾಪಾಡಿದರು. ಆ ಸಮಯದಲ್ಲಿ ನನಗೂ ಕೋವಿಡ್ ಬಂದಿತ್ತು, ಯಡಿಯೂರಪ್ಪನವರ ಕೆಲಸವನ್ನು ನೋಡಿ ನಾನು ಸಹ ಮನೆಯಿಂದ ಆಚೆ ಬಂದು ಆನೇಕ ಕಾರ್ಯಗಳನ್ನು ಮಾಡಲಾಯಿತು. ಇಡೀ ರಾಜ್ಯದಲ್ಲಿ ಶಿಕಾರಿಪುರ ಒಂದು ಮಾದರಿ ವಿಧಾನಸಭಾ ಕ್ಷೇತ್ರವಾಗಿದೆ, ನಮ್ಮ ಬ್ಯಾಟರಾಯನಪುರವು ಸಹ ಮಾದರಿ ವಿಧಾನಸಭಾ
ಕ್ಷೇತ್ರವಾಗಬೇಕೆಂಬ ಸಂಕಲ್ಪದೊAದಿಗೆ ಅನೇಕ ಕೆಲಸಗಳನ್ನು ಮಾಡುತ್ತಿದ್ದೇವೆ, ಬ್ಯಾಟರಾಯನಪುರದಲ್ಲಿ ಬದಲಾವಣೆ ತಂದು, ಈ ಕ್ಶೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ. ಈ ದಿನ ಈ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ನಮ್ಮನ್ನು ಆಶೀರ್ವಾದ ಮಾಡಲು ಬಂದಿರುವAತಹ ಎಲ್ಲಾ ಗುರುಗಳಿಗೂ, ನಾಯಕರಿಗೂ ನನ್ನ ಅನಂತ ಧನ್ಯವಾದಗಳು ಮತ್ತು ಇಡೀ ಮೈದಾನದ ಉದ್ದಗಲಕ್ಕೂ ಆಸಿನರಾಗಿರುವ ಜನರಿಗೂ ಹಾಗೂ ಸಮಸ್ತ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಸಮಸ್ತ ನಾಗರೀಕರಿಗೂ ದೇವರು ಸುಖ ನೆಮ್ಮದಿ ಮತ್ತು ಸಂತೋಷದ ಜೀವನ ಅನುಗ್ರಹಿಸಲಿ ಎಂದು ಹೇಳಿದರು.
ಶಾಸಕರಿಂದ ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಿದ್ಯಾರ್ಥಿನಿಲಯ ಉದ್ಘಾಟನೆ
ಮಂಡ್ಯ ನಗರಸಭೆಯಿಂದ ದಾಳಿ: 364 ಕೆ.ಜಿ ಪ್ಲಾಸ್ಟಿಕ್ ವಶ ರೂ 23820/- ದಂಡ