ಬೆಂಗಳೂರು: ನಾ ಇನ್ನೂ ಅಮಿತ್ ಶಾರನ್ನ ಭೇಟಿ ಆಗಿಲ್ಲ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆ 2-3 ದಿನಗಳಲ್ಲಿ ನಿಚ್ಚಿತವಾಗಿ ಆಗುವ ವಿಶ್ವಾಸ ಇದೆ. ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡೇ ರಾಜ್ಯಕ್ಕೆ ಅಮಿತ್ ಶಾ ಬಂದಿದ್ದಾರೆ ಅನ್ಕೊಂಡಿದ್ದೇನೆ ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಂಪುಟ ವಿಸ್ತರಣೆ ನಿರ್ಧಾರ ಪ್ರಕಟ ಮಾಡ್ತಾರೆ. ಇಲ್ಲ ದೆಹಲಿಗೆ ಹೋಗಿ, ಮೋದಿಯವರ ಜೊತೆ ಚರ್ಚೆ ಮಾಡಿ ಪ್ರಕಟ ಮಾಡಬಹುದು. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.




