Wednesday, May 6, 2026

ಅಂತಾರಾಷ್ಟ್ರೀಯ

Eiffel Tower : ಐಫೆಲ್ ಟವರ್ ನಲ್ಲಿಯೇ ನಿದ್ದೆ ಹೋದ ಪ್ರವಾಸಿಗರು..! ಮುಂದೇನಾಯ್ತು..?!

International News : ಐಫೆಲ್​ ಟವರ್​ಗೆ ಬಾಂಬ್​ ಬೆದರಿಕೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದ ಬೆನ್ನಲ್ಲೇ ಇದೀಗ ಮತ್ತೊಂದು  ಘಟನೆ ಆತಂಕಕ್ಕೆ ಎಡೆಮಾಡಿದೆ. ಕುಡಿದ ಮತ್ತಿನಲ್ಲಿ ಅಮೆರಿಕದ ಇಬ್ಬರು ಪ್ರವಾಸಿಗರು ಐಫೆಲ್​ ಟವರಿನ ಮೇಲೆ ನಿದ್ದೆ ಹೋದ ಘಟನೆ ಇತ್ತೀಚೆಗೆ ನಡೆದಿದೆ. ಭದ್ರತಾ ನಿಯಮಗಳನ್ನು ಮೀರಿದ ಈ ಪ್ರವಾಸಿಗರು ಐಫೆಲ್​ ಟವರಿನ ಮಹಡಿಗಳಲ್ಲಿ ಒಂದಿಡೀ ರಾತ್ರಿಯನ್ನು...

Hariyana: ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಕೋಚ್ ಅಮಾನತು

ಹರ್ಯಾಣ :ಸಚಿವರಾದ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಜೂನಿಯರ್ ಅಥ್ಲೆಟಿಕ್ಸ್ ಕೋಚ್ ಅವರನ್ನು ನೀತಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆಗಸ್ಟ್ 11 ರಂದು ಹರಿಯಾಣದ ಕ್ರೀಡಾ ಇಲಾಖೆಯ ನಿರ್ದೇಶಕ ಯಶೇಂದ್ರ ಸಿಂಗ್ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಆದರೆ ಅಮಾನತಿಗೆ ಕಾರಣಗಳನ್ನು ಉಲ್ಲೇಖಿಸಲಾಗಿಲ್ಲ. ಆದಾಗ್ಯೂ, ಅಶಿಸ್ತು ಮತ್ತು...

Earthquake : ಮ್ಯಾನ್ಮಾರ್ : ಕಚಿನ್ ಪ್ರಾಂತ್ಯದಲ್ಲಿ ಭೂಕುಸಿತ : 25 ಮೃತದೇಹ ಪತ್ತೆ

International News : ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಉತ್ತರ ಕಚಿನ್ ಪ್ರಾಂತ್ಯದ ಹಪಕಾಂತ ಪಟ್ಟಣದ ಹೊರವಲಯದಲ್ಲಿರುವ ಜೇಡ್ ಗಣಿಯಲ್ಲಿ ಭೂಕುಸಿತ ಸಂಭವಿಸಿದೆ. ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಸುಮಾರು 180 ಮೀಟರ್ ಎತ್ತರದ ಗೋಡೆ ಕುಸಿದುಬಿದ್ದಿದೆ ಎನ್ನಲಾಗಿದೆ. ಈ ಸ್ಥಳವು ಮ್ಯಾನ್ಮಾರ್ನ ಅತಿದೊಡ್ಡ ಪಟ್ಟಣವಾದ ಯಾಂಗೊನ್ನ ಉತ್ತರಕ್ಕೆ ಸುಮಾರು 950 ಕಿಲೋಮೀಟರ್ (600 ಮೈಲಿ) ದೂರದಲ್ಲಿದೆ....

Jeffrey Ferguson : ನ್ಯಾಯಾಧೀಶನೇ ಪತ್ನಿಯನ್ನು ಗುಂಡಿಟ್ಟು ಕೊಂದ..?!

International News : ಕ್ಯಾಲಿಫೋರ್ನಿಯಾದಲ್ಲಿ ನ್ಯಾಯಾಧೀಶರೊಬ್ಬರು ತನ್ನ ಹೆಂಡತಿಯನ್ನು ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ. ಕೊಂದ ಬಳಿಕ ತನ್ನ ಸಹದ್ಯೋಗಿಯೊಬ್ಬರಿಗೆ `ನಾನು ನಾಳೆ ಕೋರ್ಟ್‍ಗೆ ಬರುವುದಿಲ್ಲ, ಕಸ್ಟಡಿಯಲ್ಲಿರುತ್ತೇನೆ’ ಎಂದು ಸಂದೇಶ ಕಳುಹಿಸಿದ್ದಾನೆ. ನ್ಯಾಯಾಧೀಶ ಜೆಫ್ರಿ ಫರ್ಗುಸನ್ (72) ಎಂಬಾತ ಪತ್ನಿಯನ್ನು ಕೊಲೆಗೈದ ಆರೋಪಿ. ಆತನ ಮನೆಯಲ್ಲಿ ಪರವಾನಿಗೆ ಹೊಂದಿದ್ದ ಸುಮಾರು 47 ಬಂದೂಕುಗಳು ಮತ್ತು...

Rishi Sunak: ‘ರಾಮ್ ಕಥಾ’ ನನ್ನ ಹಿಂದೂ ನಂಬಿಕೆಯು ನನಗೆ ಪ್ರಧಾನ ಮಂತ್ರಿಯಾಗಿ ಮಾರ್ಗದರ್ಶನ ನೀಡುತ್ತದೆ..!

ಅಂತರಾಷ್ಟ್ರೀಯ ಸುದ್ದಿ: ರಿಷಿ ಸುನಕ್ ಅವರು ಮಂಗಳವಾರ ತಮ್ಮ ಹಿಂದೂ ನಂಬಿಕೆಯು ಅವರ ಜೀವನದ ಪ್ರತಿಯೊಂದು ಅಂಶದಲ್ಲಿ ಮಾರ್ಗದರ್ಶನ ನೀಡುತ್ತದೆ ಮತ್ತು ಬ್ರಿಟನ್ ಪ್ರಧಾನಿಯಾಗಿ ಅತ್ಯುತ್ತಮವಾದದ್ದನ್ನು ಮಾಡಲು ಧೈರ್ಯವನ್ನು ನೀಡುತ್ತದೆ ಎಂದು ಹೇಳಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜೀಸಸ್ ಕಾಲೇಜಿನಲ್ಲಿ ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರು ನಡೆಸುತ್ತಿರುವ 'ರಾಮ್ ಕಥಾ' ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ,...

Anwarul Haq Kakar : ಅನ್ವರುಲ್ ಹಕ್‌ ಕಾಕ‌ರ್‌ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

International News : ಇತ್ತೀಚೆಗಷ್ಟೇ ಪಾಕ್ ನ ಹಂಗಾಮಿ ಪ್ರಧಾನಿಯಾಗಿ ಸೂಚಿಸಲ್ಪಟ್ಟ ಅನ್ವರುಲ್ ಹಕ್ ಕಾಕರ್ ಪ್ರಮಾಣ ವಚನ ಸ್ವೀಕರಿಸಿದರು. ಬಲೂಚಿಸ್ತಾನದ ಪುಶ್ರುನ್ ಜನಾಂಗದ ನಾಯಕ ಅನ್ವರುಲ್ ಹಕ್‌ ಕಾಕ‌ರ್‌ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷ ಅರಿಫ್ ಅಲ್ಲಿ ಅವರು ಕಾಕರ್‌ ಅವರಿಗೆ...

Donald Trump: ಜಾರ್ಜಿಯಾದಲ್ಲಿ ಟ್ರಂಪ್ ದೋಷಾರೋಪಣೆಯಿಂದ ಪ್ರಮುಖ ಟೇಕ್ಅವೇಗಳು

ಅಂತರಾಷ್ಟ್ರೀಯ ಸುದ್ದಿ: ಜಾರ್ಜಿಯಾದಲ್ಲಿನ ಚುನಾವಣಾ ಫಲಿತಾಂಶಗಳನ್ನು ಹಿಮ್ಮೆಟ್ಟಿಸಲು ಟ್ರಂಪ್ ಮತ್ತು ಅವರ ಮಿತ್ರರಾಷ್ಟ್ರಗಳ ಹಲವಾರು ಪ್ರಯತ್ನಗಳನ್ನು ದೋಷಾರೋಪಣೆಯು ಒಟ್ಟುಗೂಡಿಸುತ್ತದೆ. 19 ಪ್ರತಿವಾದಿಗಳಲ್ಲಿ ಯಾರೊಬ್ಬರೂ ಆ ಎಲ್ಲಾ ವಿಭಿನ್ನ ಯೋಜನೆಗಳಲ್ಲಿ ಭಾಗವಹಿಸಿದ್ದಾರೆಂದು ಆರೋಪಿಸಲಾಗಿಲ್ಲ, ಆದರೆ RICO ಕಾನೂನಿನಡಿಯಲ್ಲಿ, ಪ್ರಾಸಿಕ್ಯೂಟರ್‌ಗಳು ಒಂದೇ ರೀತಿಯ ಗುರಿಯೊಂದಿಗೆ ನಿರಂತರ ಕ್ರಿಮಿನಲ್ ಉದ್ಯಮದ ಭಾಗವಾಗಿ ರಾಜ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಾಬೀತುಪಡಿಸಬೇಕು. 2020...

India China: ಭಾರತ, ಚೀನಾ ‘ಸಕಾರಾತ್ಮಕ’ ಮಾತುಕತೆ

ಅಂತರಾಷ್ಟ್ರೀಯ ಸುದ್ದಿ:  ಭಾರತೀಯ ಸೇನೆಯ ಹಿರಿಯ ಕಮಾಂಡರ್‌ಗಳು ಮತ್ತು ಚೀನಾದ ಪಿಎಲ್‌ಎ ನಡುವಿನ 19 ನೇ ಸುತ್ತಿನ ಮಾತುಕತೆ ಸೋಮವಾರ ಸುಮಾರು 10 ಗಂಟೆಗಳ ಕಾಲ ನಡೆಯಿತು. ಎರಡು ಕಡೆಯವರು ಐಂಅ ಉದ್ದಕ್ಕೂ ಉಳಿದ ಮುಖಾಮುಖಿ ಪಾಯಿಂಟ್‌ಗಳಾದ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ಗಳ ಮೇಲೆ ಕೇಂದ್ರೀಕರಿಸಿದರು ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)...

Anwar Ul Haq Kakar : ಅನ್ವರ್-ಉಲ್-ಹಕ್ ಕಾಕರ್,  ಪಾಕ್- ಹಂಗಾಮಿ ಪ್ರಧಾನಿಯಾಗಿ ನೇಮಕ

International News : ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್ ನಡುವಿನ ಸಭೆಯ ಬಳಿಕ ಅನ್ವರ್-ಉಲ್-ಹಕ್ ಕಾಕರ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ ಎಂಬ ಮಾಹಿತಿ ಇದೆ. ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗಳ ಮೇಲ್ವಿಚಾರಣೆಗಾಗಿ ಹಂಗಾಮಿ ಪ್ರಧಾನಿಯಾಗಿ -ಉಲ್-ಹಕ್ ಕಾಕರ್ ಅವರನ್ನು ಈ ಸಭೆಯಲ್ಲಿ ಹೆಸರು ಸೂಚಿಸಲಾಗಿದೆ. ಅನ್ವರ್-ಉಲ್-ಹಕ್ ಕಾಕರ್...

Eiffel Tower : ವಿಶ್ವ ಪ್ರಸಿದ್ಧ ಐಫೆಲ್ ಟವರ್ ಗೆ ಕಂಟಕ..?!

International News: ಐತಿಹಾಸಿಕ ವಿಶ್ವ ಪ್ರಸಿದ್ಧಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಫ್ರೆಂಚ್‌ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ. ಬಾಂಬ್‌ ಬೆದರಿಕೆ ಕರೆ ಬರುತ್ತಿದ್ದಂತೆ ಐಫೆಲ್‌ ಟವರ್‌ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರನ್ನು ಸ್ಥಳಾಂತರ ಮಾಡಲಾಗಿದ್ದು, ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಳೆದ ಒಂದು ವರ್ಷದಲ್ಲೇ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಿಶ್ವವಿಖ್ಯಾತ ಐಫೆಲ್‌ ಟವರ್‌ ವೀಕ್ಷಣೆ...
- Advertisement -spot_img

Latest News

85 ಮೀಟರ್ ಉದ್ದದ ಗೋಡೆಗೆ ಕನ್ನಡಿ! ಬಯಲು ಮೂತ್ರ ವಿಸರ್ಜನೆಗೆ ಮಿರರ್ ಬ್ರೇಕ್!

ಮೈಸೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಯಲು ಮೂತ್ರ ವಿಸರ್ಜನೆ ತಡೆಯಲು ಪಾಲಿಕೆ ವತಿಯಿಂದ ವಿನೂತನ ಕ್ರಮ ಕೈಗೊಳ್ಳಲಾಗಿದೆ. ವಾಣಿ ವಿಲಾಸ ಒಳಚರಂಡಿ ವಿಭಾಗದ ವತಿಯಿಂದ, ನಗರ...
- Advertisement -spot_img