Tuesday, December 23, 2025

ಜಿಲ್ಲಾ ಸುದ್ದಿಗಳು

ಟನಲ್ ರಸ್ತೆ ಟೆಂಡರ್‌ ವಿವಾದ, ಕಾಂಗ್ರೆಸ್ ಗೆ ಧರ್ಮ ಸಂಕಟ!

ಬೆಂಗಳೂರು ಟನಲ್ ರಸ್ತೆ ಯೋಜನೆ ಇದೀಗ ಕೇವಲ ಮೂಲಸೌಕರ್ಯ ವಿಚಾರವಾಗಿಲ್ಲ. ಇದು ರಾಜಕೀಯ ವಾದ–ವಿವಾದಕ್ಕೂ ಕಾರಣವಾಗಿದೆ. ಕಾರಣ, ಬೆಂಗಳೂರು ಟನಲ್ ರಸ್ತೆ ಟೆಂಡರ್‌ನಲ್ಲಿ ಅದಾನಿ ಗ್ರೂಪ್ ಅತಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿ ಮುಂಚೂಣಿಯಲ್ಲಿದೆ. ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಸದಾ ಅದಾನಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್ ಪಕ್ಷ, ಈಗ ಅದೇ ಅದಾನಿ ಸಮೂಹಕ್ಕೆ ಟೆಂಡರ್...

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ ವಿಳಂಬ ಹಾಗೂ ಬೇಜಾವಾಬ್ದಾರಿ ಪಿಡಿಓ, ವಾಲಿಕರ ಮತ್ತು ಶಾಲಾ ಶಿಕ್ಷಕರ ಕೆಲಸದ ಕುರಿತಾಗಿ ಅಸಮಾಧಾನ ತೋರಿದರು. ಮಲ್ಲನಾಯಕನಕೊಪ್ಪ, ಮೂಗಬಸರಿಕಟ್ಟಿ, ಸಿಂಗಾಪೂರ್ ಸೇರಿದಂತೆ ಹಲವು ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ಶಾಸಕ...

ಹೊಸ ವರ್ಷಕ್ಕೆ ನಗರಿ ಸಜ್ಜು – ಧರೆಗೆ ಈಶ್ವರನ ಹೂದೋಟ!

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ನಡುವೆ ಸಾಂಸ್ಕೃತಿಕ ನಗರಿ ಮೈಸೂರು ವಿಶೇಷವಾಗಿ ಮಿನುಗುತ್ತಿದೆ. 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸಲು ಮೈಸೂರು ಅರಮನೆ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ. ಅರಮನೆ ಆವರಣದಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು, ಈಶ್ವರನ ಹೂದೋಟ ಧರೆಗೆ ಇಳಿದ ಅನುಭವವನ್ನು ನೀಡುತ್ತಿದೆ. 11...

40 ಪ್ರಯಾಣಿಕರ ಪಾಲಿಗೆ ದೇವರಾದ ಬಸ್‌ ಚಾಲಕ!

ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಭೀತಿಗೆ ತಳ್ಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬಸ್ ಸಂಪೂರ್ಣವಾಗಿ ಉರಿದುಹೋಗಿದೆ. ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಗೆ ನಂಜನಗೂಡಿನ ಹೊಸಳ್ಳಿ ಗೇಟ್ ಸಮೀಪ ಈ ಘಟನೆ ಸಂಭವಿಸಿದೆ. ಬಸ್‌ನೊಳಗೆ ಸುಮಾರು 40...

ಪತ್ನಿ ದಬ್ಬಾಳಿಕೆಗೆ ಬೇಸತ್ತ ಪತಿ – ಕೊನೆಗೆ ಹತ್ಯೆಗೆ ಸುಪಾರಿ ಕೊಟ್ಟ

ಪತ್ನಿಯ ದಬ್ಬಾಳಿಕೆ ವರ್ತನೆಯಿಂದ ಬೇಸತ್ತು, ಆಕೆಯ ಹತ್ಯೆಗೆ ಸುಪಾರಿ ನೀಡಿದ ಪತಿ ಜೈಲು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿ ನಾಗರತ್ನ (46) ಅವರ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪಾನಿಪೂರಿ ವ್ಯಾಪಾರಿ ಮಹೇಶ್ (44) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. “ನಾನು ಗಳಿಸಿದ್ದ ಹಣವನ್ನೆಲ್ಲ ಕಿತ್ತುಕೊಂಡು, ಬಡ್ಡಿ ವ್ಯವಹಾರ ನಡೆಸುತ್ತಿದ್ದ ಪತ್ನಿ...

ಜಾನಪದ ಕಲಾವಿದ ‘ಮೈಲಾರಿ’ ಬಂಧನ!

ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡಲು ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜಾನಪದ ಕಲಾವಿದ ಮೈಲಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರಕ್ಕೆ ತೆರಳಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಮೈಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆ ಕುಡಗುಂಟಿ ಗ್ರಾಮದ 29 ವಯಸ್ಸಿನ ಮೈಲಾರಪ್ಪ ಮಡಿವಾಳರ ಉರುಫ್ ಮ್ಯೂಸಿಕ್ ಮೈಲಾರಿಯನ್ನು ವಿಜಯಪುರ ಜಿಲ್ಲೆ ತಿಕೋಟದಲ್ಲಿ...

GPS ಟ್ರ್ಯಾಕರ್‌ ಸಹಾಯದಿಂದ PG ಕಳ್ಳತನದ ರಹಸ್ಯ ಬಯಲು

ಪಿಜಿ ಕೊಠಡಿಗೆ ನುಗ್ಗಿ ಲ್ಯಾಪ್‌ಟಾಪ್, ಎರಡು ಮೊಬೈಲ್ ಫೋನ್, ಏರ್‌ಪಾಡ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳು ಸೇರಿ ಸುಮಾರು 2.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದ ತಮಿಳುನಾಡು ಮೂಲದ ರಾಘವ್ (24) ಅವರನ್ನು ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಕ್ಕಸಂದ್ರದ ಪಿಜಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಚಂದ್ರಶೇಖರ್ ರೆಡ್ಡಿ ಮತ್ತು ಖಾಸಗಿ...

ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿಇದೆ ವಾರಸುದಾರರಿಲ್ಲದ ₹157 ಕೋಟಿ !

ಮೈಸೂರು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಠೇವಣಿ ಹಣವಾಗಿ ಸುಮಾರು ₹157 ಕೋಟಿ ಇರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿದೆ. ಈ ಹಣವನ್ನು ಅರ್ಹ ಗ್ರಾಹಕರು ಅಥವಾ ವಾರಸುದಾರರು ಪಡೆದುಕೊಳ್ಳುವಂತೆ ಆರ್‌ಬಿಐ ಅವಕಾಶ ನೀಡಿದೆ. ಕೇಂದ್ರ ಸರ್ಕಾರದ ‘ನಿಮ್ಮ ಹಣ – ನಿಮ್ಮ ಅಧಿಕಾರ’ ಅಭಿಯಾನದಡಿ, ವರ್ಷಗಳಿಂದ ವಾಪಸ್ ಪಡೆಯದೇ ಉಳಿದಿರುವ ಹಣದ ಬಗ್ಗೆ ಗ್ರಾಹಕರಿಗೆ...

ಕಲಬುರಗಿಯಲ್ಲಿ ಕಳ್ಳರಿಗೆ ಕಂಟಕ: ಭರ್ಜರಿ ಬೇಟೆ ಆಡಿದ ಪೊಲೀಸರು

ಕಲಬುರಗಿ ಜಿಲ್ಲೆಯ ಪೊಲೀಸರು ಭರ್ಜರಿ ಕಳ್ಳರ ಬೇಟೆ ಆಡಿದ್ದಾರೆ. ಕಲಬುರಗಿ ಜಿಲ್ಲೆಯ ಶಹಾಬಾದ್ ಮತ್ತು ಜೇವರ್ಗಿ ಠಾಣೆಗಳ ಪೊಲೀಸರು ಸಂಯುಕ್ತ ಕಾರ್ಯಾಚರಣೆ ನಡೆಸಿ, ನಾಲ್ಕು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಹಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ...

ಅಕ್ಕಿ ಮಾಫಿಯಾಗೆ ಅಧಿಕಾರಿ ಬಲಿ

ಹಾಸನ ಪಡಿತರ ಅಕ್ಕಿ ಅಕ್ರಮ ಸಾಗಣೆ ದಂಧೆ ಅಧಿಕಾರಿಯೊಬ್ಬರನ್ನು ಬಲಿ ಪಡೆದಿರುವ ಅನುಮಾನ ಮೂಡಿದೆ. ಲಾರಿ ಹರಿದು ಸಾವಿಗೀಡಾಗಿದ್ದ ಸಾರಿಗೆ ಇಲಾಖೆ ತಪಾಸಣಾ ಇನ್‌ಸ್ಪೆಕ್ಟರ್ ಶಕುನಿಗೌಡ ಪ್ರಕರಣ ಸ್ಫೋಟಕ ತಿರುವು ಪಡೆದಿದ್ದು, ಇದು ಅಪಘಾತವಲ್ಲ ಕೊಲೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಶನಿವಾರ ಬೆಳಗ್ಗೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಸಮೀಪ, ನಲ್ಲೂರು–ಮಗ್ಗೆ ಮಾರ್ಗದಲ್ಲಿ...
- Advertisement -spot_img

Latest News

ಬಾಂಗ್ಲಾದಲ್ಲಿ ದೀಪು ದಾಸ್ ಹತ್ಯೆ ಬೆನ್ನಲ್ಲೇ ದೆಹಲಿ ಧಗಧಗ!

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್‌ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...
- Advertisement -spot_img