Tuesday, October 21, 2025

ಜಿಲ್ಲಾ ಸುದ್ದಿಗಳು

ದಲಿತ ಸಮುದಾಯದಿಂದಲೇ ದಲಿತರ ಮೇಲೆ ದೌರ್ಜನ್ಯ – 7 ದಲಿತ ಕುಟುಂಬಗಳಿಗೆ ಬಹಿಷ್ಕಾರ!

ಇದೆಂತ ದುರ್ವಿಧಿ... ದಲಿತ ಸಮುದಾಯದಿಂದಲೇ ದಲಿತರ ಮೇಲೆ ದೌರ್ಜನ್ಯ ಎಸಗಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯದೊಳಗೇ ಸಮಾಜದ ಯಜಮಾನರು ಎಂದು ಗುರುತಿಸಿಕೊಂಡವರು 7 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಕೇವಲ ಕೂಲಿ ಸಂಬಳ ಅಥವಾ ವರಿಯ ಬಗ್ಗೆ ಪ್ರಶ್ನೆ ಎತ್ತಿದ...

ಕೊಪ್ಪಳದ ಯುವ ಕೃಷಿಕನಿಗೆ ಕರ್ನಾಟಕ ವಿಭೂಷಣ ರಾಷ್ಟ್ರಪ್ರಶಸ್ತಿ!

ಕೊಪ್ಪಳ ಜಿಲ್ಲೆಯ ಗಿಣಿಗೇರ ಮೂಲದ ಯುವ ಕೃಷಿಕ ಹನುಮಂತಪ್ಪ ಕೊಲ್ಕರನಿಗೆ ಕರ್ನಾಟಕ ವಿಭೂಷಣ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ, ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿದ ಸಾಧಕರಿಗೆ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ರೈತ ಕುಟುಂಬದಲ್ಲಿ ಜನಿಸಿ ಹನುಮಂತಪ್ಪ ಕೋಲ್ಕಾರ್ ಕೃಷಿಯನ್ನೇ ಬದುಕಾಗಿಸಿಕೊಂಡು...

ನನಗೇನಾದರೂ ಆದರೆ ಖರ್ಗೆ ಕುಟುಂಬವೇ ಹೊಣೆ: ಛಲವಾದಿ ನಾರಾಯಣಸ್ವಾಮಿ!

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಮೇಲಿನ ಬೆಂಗಾವಲು ಭದ್ರತೆಯನ್ನ ಸರ್ಕಾರ ಹಿಂತೆಗೆದುಕೊಂಡಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೇನಾದರೂ ಆದರೆ ಅದಕ್ಕೆ ಸಂಪೂರ್ಣ ಹೊಣೆ ರಾಜ್ಯ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದದು ಎಂದು ಅವರು ಎಚ್ಚರಿಸಿದ್ದಾರೆ. ನನ್ನ ಬೆಂಗಾವಲು ರಕ್ಷಕರನ್ನ ತೆರವುಗೊಳಿಸಿರುವುದು ಸರ್ಕಾರ ನನ್ನನ್ನು ಟಾರ್ಗೆಟ್ ಮಾಡುತ್ತಿರುವ ಸ್ಪಷ್ಟ...

ಧರ್ಮದ ಹೆಸರಿನಲ್ಲಿ ವಿವಾದ, ಲಿಂಗಾಯತ ಸಂಘಟನೆಗಳಿಂದ ಪ್ರತಿಭಟನೆ!

ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಕಳೆದ ನಾಲ್ಕೈದು ವರ್ಷಗಳಿಂದಲೂ ಅವ್ಯವಹಾರ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಿರುದ್ಧ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೆ ಸಾರ್ವಜನಿಕರು ಅದೆಷ್ಟೋ ಬಾರಿ ಪಂಚಾಯಿತಿ ಎದುರು ಧರಣಿ...

ಮೈಮುಲ್‌ ಎಲೆಕ್ಷನ್‌ಗೆ ಅವಿರೋಧ ಆಯ್ಕೆಗೆ ಮಹದೇವಪ್ಪ ಸೂಚನೆ

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಎಚ್‌.ಡಿ. ಕೋಟೆಯ ಕೆ.ಈರೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಸೂಚಿಸಿದ್ದಾರೆ. ಸಚಿವರ ಅಧ್ಯಕ್ಷತೆಯಲ್ಲಿ ನಿರ್ದೇಶಕರ ಸಭೆ ನಡೆಸಲಾಗಿದೆ. ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಉಳಿದ ಅವಧಿಗೆ ಈರೇಗೌಡರಿಗೆ...

ಅಂಗವಿಕಲ ಸೈನಿಕನ ಮೇಲೆ ಹಲ್ಲೆ, ನ್ಯಾಯಕ್ಕಾಗಿ ಧ್ವನಿ ಎತ್ತಿದ ನಾರಿ!

  ಧಾರವಾಡದಲ್ಲಿ ನಿವೃತ್ತ ಅಂಗವಿಕಲ ಸೈನಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ಅಸ್ವಸ್ಥನಾಗಿರುವ ನಿವೃತ್ತ ಅಂಗವಿಕಲ ಸೈನಿಕನ ಮೆಸ್ ಗೆ ನೀಡಿದ ವೀರ ನಾರಿ ಮತ್ತು ಕೆಪಿಸಿಸಿ ನಿವೃತ್ತ ಮಹಿಳಾ ಸೈನಿಕರ ಸಂಘಟನೆಯ ರಾಜ್ಯಾಧ್ಯಕ್ಷೆ ಶ್ರೀಮತಿ ಸ್ವರೂಪರಾಣಿ ಭೇಟಿ ನೀಡಿದ್ದಾರೆ. ಧಾರವಾಡದ ಸಪ್ತಾಪೂರದ...

ಆಲಿಯಾ ಮನೆ ಸೇರಲಿದೆ ನಮ್ಮ ಮೈಸೂರಿನ ಗಣಪ!

ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಅವರು ವಿಘ್ನ ನಿವಾರಕ ಗಣೇಶನನ್ನು ತುಂಬಾನೇ ನಂಬುತ್ತಾರೆ ಮತ್ತು ಆರಾಧಿಸುತ್ತಾರೆ. ನಾನ್ಯಾಕ್‌ ಈ ವಿಚಾರ ಹೇಳ್ತಾ ಇದ್ದೀನಿ ಅಂದ್ರೆ, ಇದೀಗ ಲೇಟೆಸ್ಟ್‌ ವಿಷಯವೊಂದು ರವೀಲ್‌ ಆಗಿದೆ. ಅದೇನಪ್ಪ ಅಂದ್ರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಗಣಪನ ವಿಗ್ರಹವೊಂದು ಆಲಿಯಾ ಅವರ ಮನೆ ಬೆಳಗಲಿದೆ. ಹೌದು, ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌...

ಸಮೀಕ್ಷೆಗೆ ತೆರಳಿ ಶಿಕ್ಷಕಿ ನಾಪತ್ತೆ : ಕೋಲಾರದಲ್ಲಿ ಶವವಾಗಿ ಪತ್ತೆ !

ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬರ ಶವ ಪತ್ತೆಯಾದ ಘಟನೆ ಕೋಲಾರದಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಅಖ್ತರ್‌ ಬೇಗಂ ಎಂದು ಗುರುತಿಸಲಾಗಿದ್ದು, ಅವರು ಕೋಲಾರ ತಾಲೂಕಿನ ಬಿ.ಹೊಸಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ನಾಪತ್ತೆಯಾಗಿ ಎರಡು ದಿನಗಳ ಬಳಿಕ, ಕೆಜಿಎಫ್‌ ತಾಲೂಕಿನ ಐಪಳ್ಳಿ ಕೆರೆಯಲ್ಲಿ ಅವರ ಶವ ಪತ್ತೆಯಾಗಿದೆ. ಈ ಘಟನೆ ಕೊಲೆಯೋ...

ಹುಬ್ಬಳ್ಳಿಯಲ್ಲಿ ಮತ್ತೆ ಬಾಲ ಬಿಚ್ಚಿದ ಪುಡಿರೌಡಿಗಳು!

ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ವಿಕಾಸ ನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಾನು ದುಡಿದ ಹಣ ಕೇಳಿದ್ದಕ್ಕೆ, ಮಾಲೀಕ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾನಂತೆ. ಮತ್ತೊಂದು ಘಟನೆ ಕಮರಿಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೊರವಿಹಕ್ಕಲ ಏರಿಯಾದಲ್ಲಿ, ಮನೆಗಳಿಗೆ ತೆರಳಿ ಜನರ ಮೇಲೆ...

ವಾರದ 6 ದಿನ ಗವಿಮಠದ ಶ್ರೀ ಮೌನವ್ರತ

ತ್ರಿವಿಧ ದಾಸೋಹಿ ಖ್ಯಾತಿಯ ಕೊಪ್ಪಳ ಗವಿಮಠದ ಅಭಿನವ ಗವಿಸಿದೇಶ್ವರ ಮಹಾ ಸ್ವಾಮಿಗಳು, ಮಹಾ ಮೌನ ಅನುಷ್ಠಾನ ಕೈಗೊಂಡಿದ್ದಾರೆ. ವಾರದ 6 ದಿನ ಮೌನವ್ರತ ಮಾಡ್ತಿದ್ದು, ಪ್ರತಿ ಸೋಮವಾರ ಮಾತ್ರ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ಪ್ರಾರಂಭ ಆಗಿದ್ದು, ಶ್ರೀಗಳ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ. ಬಿಎಸ್‌ಪಿಎಲ್ ಕಾರ್ಖಾನೆಯ ವಿಸ್ತರಣೆಗೆ ವಿರೋಧಿಸಿ, 2025ರ ಫೆಬ್ರವರಿ 24ರಂದು...
- Advertisement -spot_img

Latest News

Bollywood News: ಶಾರುಖ್ ಮನೆಗೆ ಪಾರ್ಟಿಗೆ ಹೋದಾಗ ನಟ ಗುಲ್ಶನ್‌ಗೆ ಇರಿಸುಮುರುಸಾಗಿತ್ತಂತೆ.. ಯಾಕೆ..?

Bollywood News: ಗುಲ್ಶನ್ ದೇವಯ್ಯ. ಇಷ್ಟು ವರ್ಷ ಬಾಲಿವುಡ್ ನಟನಾಗಿ ಮಿಂಚಿ, ಇದೀಗ ಕಾತಾರದ ಮೂಲಕ ಕನ್ನಡ ಸಿನಿಮಾಗೆ ಲಗ್ಗೆ ಇಟ್ಟಿದ್ದಾರೆ. ಕಾಂತಾರದಲ್ಲಿ ಕೆಲಸಕ್ಕೆ ಬಾರದ...
- Advertisement -spot_img