Sunday, October 5, 2025

ರಾಷ್ಟ್ರೀಯ

ಶಾರುಖ್‌ ಖಾನ್‌ ಹಿಂದಿಕ್ಕಿದ ಕನ್ನಡಿಗ ರಿಷಬ್‌ ಶೆಟ್ರು!

ತುಳುನಾಡಿನ ದೈವದ ಕಥೆಯಾಧಾರಿತ ಕಾಂತಾರಾ ಚಾಪ್ಟರ್‌ 1 ಸಿನಿಮಾ, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಪ್ರಿಮಿಯರ್‌ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ, ಇಷ್ಟು ದೊಡ್ಡ ಮೊತ್ತ ಸಂಪಾದಿಸಿರುವುದು ಹೊಸ ದಾಖಲೆಯಾಗಿದೆ. ಭಾರತದಲ್ಲಿ ಒಟ್ಟು 6,500 ಸ್ಕ್ರೀನ್‌ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿದೆ. ಎಲ್ಲಾ ಭಾಷೆಗಳೂ ಸೇರಿ ಭಾರತದಲ್ಲಿ ಅಂದಾಜು 45 ಕೋಟಿ...

ಭಾಗವತ್‌ ಅಶಾಂತಿಯ ಎಚ್ಚರಿಕೆ : ದುಷ್ಟಶಕ್ತಿಗಳ ಬಗ್ಗೆ ಸಂದೇಶ!

ಭಾರತದ ನೆರೆಯ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಅಶಾಂತಿಯ ಪ್ರಮುಖ ಕಾರಣ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕದ ಕೊರತೆ ಹಾಗೂ ಅಸಮರ್ಥ ಆಡಳಿತವೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಎಚ್ಚರಿಸಿದ್ದಾರೆ. ಭಾರತದಲ್ಲೂ ಇಂತಹ ಅಶಾಂತಿಯನ್ನು ಬಯಸುವ ಶಕ್ತಿಗಳು ಸಕ್ರಿಯವಾಗಿವೆ ಎಂದು ಅವರು ಎಚ್ಚರಿಕೆ ನೀಡಿದರು. ನಾಗಪುರದ ರೇಶಿಂಬಾಗ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ವಿಜಯದಶಮಿ ಹಾಗೂ ಶತಮಾನೋತ್ಸವ ಸಮಾರಂಭದಲ್ಲಿ ಭಾಗವತ್...

ಬಿಜೆಪಿ ವಿರುದ್ಧ ವಿದೇಶದಿಂದ ರಾಗಾ ವಿವಾದಾತ್ಮಕ ಹೇಳಿಕೆ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಚರ್ಚೆಗೆ ಗ್ರಾಸರಾಗಿದ್ದಾರೆ. ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಭಾರತದಲ್ಲಿ ಪ್ರಜಾಪ್ರಭುತ್ವದ ರಚನೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದರು. ಭಾರತದ ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಶಕ್ತಿ ಮತ್ತು ಆರೋಗ್ಯ ವ್ಯವಸ್ಥೆಯಿಂದ ನನಗೆ ದೇಶದ ಬಗ್ಗೆ ಅಪಾರ ಆಶಾವಾದವಿದೆ. ಆದರೆ,...

‘ಸ್ವದೇಶಿ – ಸ್ವಾವಲಂಬನೆ ಭಾರತಕ್ಕೆ ಮಾರ್ಗ’ ವಿಜಯದಶಮಿಯಲ್ಲಿ ಭಾಗವತ್ ಕಿವಿಮಾತು!

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿಜಯದಶಮಿ ಭಾಷಣದಲ್ಲಿ ಸ್ವದೇಶಿ ಮತ್ತು ಸ್ವಾವಲಂಬನೆಯು ಭಾರತಕ್ಕೆ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು. ಪರಸ್ಪರ ಅವಲಂಬನೆ ಅಸಹಾಯಕತೆಯಾಗಬಾರದು ಎಂದರು. ನೇಪಾಳದ Gen Z ಪ್ರತಿಭಟನೆಗಳನ್ನು ಉಲ್ಲೇಖಿಸಿ, ಹಿಂಸಾತ್ಮಕ ಪ್ರತಿಭಟನೆಗಳು ಅರಾಜಕತೆಗೆ ಕಾರಣವಾಗುತ್ತವೆ. ಭಿನ್ನಾಭಿಪ್ರಾಯಗಳನ್ನು ಕಾನೂನು ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕು ಎಂದು ಎಚ್ಚರಿಸಿದರು. ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕದ...

ಚೂಪಾದ ಕಲ್ಲೇ ಮಡಿಲು ಮೈಮೇಲೆ ಇರುವೆಗಳು : ನವಜಾತಶಿಶುವಿನ ಹೃದಯವಿದ್ರಾವಕ ಕಥೆ

ಅಮ್ಮನ ಲಾಲಿಯಿಲ್ಲದೆ, ಬೆಚ್ಚನೆಯ ಅಪ್ಪುಗೆಯಿಲ್ಲದೆ, ಚೂಪಾದ ಕಲ್ಲುಗಳ ನಡುವೆ ತೆರೆದ ಆಕಾಶವನ್ನು ನೋಡುವಂತಾಗಿದ್ದ ನವಜಾತ ಶಿಶು ಜೀವದ ಹೋರಾಟ ನಡೆಸುತ್ತಿತ್ತು. ಮೈಮೇಲೆ ಇರುವೆಗಳ ಸಾಲು ಹಾದರೂ, ಚಿಕ್ಕ ಉಸಿರನ್ನು ಹಿಡಿದು ಬದುಕುಳಿಯಲು ಯತ್ನಿಸುತ್ತಿತ್ತು. ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದ ಈ ಘಟನೆ ಎಲ್ಲರ ಹೃದಯವನ್ನೂ ತಟ್ಟಿದೆ. ತಂದೆ-ತಾಯಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು, ಈಗಾಗಲೇ ಮೂವರು...

ತನ್ನ ಇಡೀ ಕುಟುಂಬವನ್ನೇ ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿದ ರೈತ

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದ ದುರ್ಘಟನೆ ಗ್ರಾಮವನ್ನು ಬೆಚ್ಚಿಬೀಳಿಸಿದೆ. ರೈತನೊಬ್ಬ ತನ್ನ ಕುಟುಂಬದವರನ್ನೇ ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿದ್ದರಿಂದ ಆರು ಮಂದಿ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರ ಪ್ರಕಾರ, ವಿಜಯ್ ಮೌರ್ಯ ಎಂಬ ರೈತನು ತನ್ನ ಇಬ್ಬರು ಮಕ್ಕಳನ್ನು ಹಳ್ಳಿಯಿಂದ ಮನೆಗೆ ಕರೆಸಿ, ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ತನ್ನ ಪತ್ನಿ ಮತ್ತು ಇಬ್ಬರು...

ಭಾರತದ ಟಾಪ್‌ 10 ಶ್ರೀಮಂತರು : ಬೆಂಗಳೂರಿಗೂ 3 ನೇ ಸ್ಥಾನ

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕುಟುಂಬ ಮತ್ತೆ ನಂ.1 ಸ್ಥಾನ ಅಲಂಕರಿಸಿದೆ. M3M ಇಂಡಿಯಾ ಹಾಗೂ ಹುರೂನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಜಂಟಿಯಾಗಿ ಬಿಡುಗಡೆಯಾದ 14ನೇ ಆವೃತ್ತಿಯ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತು ಕುಟುಂಬದ ನಿವ್ವಳ ಆಸ್ತಿ 9.55 ಲಕ್ಷ ಕೋಟಿ ರೂ ಆಗಿದ್ದು, ಮೊದಲ ಸ್ಥಾನದಲ್ಲಿ ಉಳಿಯುತ್ತಿದ್ದಾರೆ. ಗೌತಮ್ ಅದಾನಿ ಮತ್ತು ಕುಟುಂಬದ...

ದಸರಾ–ದೀಪಾವಳಿಗೆ ಕೇಂದ್ರದ ಬಂಪರ್ ಗಿಫ್ಟ್!

ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಬಂಪರ್ ಆರ್ಥಿಕ ಉಡುಗೊರೆ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಶುದ್ಧ ಇಂಧನ ಮತ್ತು ಸುಸ್ಥಿರ ಚಲನಶೀಲತೆಯತ್ತ ಮುಂದಾಗುತ್ತಿದೆ. ಈ ಸಂದರ್ಭ ಕೇಂದ್ರ ಹಣಕಾಸು ಸಚಿವಾಲಯವು ದೇಶದ ಎಲ್ಲಾ 28 ರಾಜ್ಯಗಳಿಗೆ ಒಟ್ಟಾರೆ ₹1,01,603 ಕೋಟಿ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ...

1.2 ಕೋಟಿ ನೌಕರರಿಗೆ ಗುಡ್ ನ್ಯೂಸ್ – ದೀಪಾವಳಿಗೆ ಮುನ್ನ ಬಂಪರ್ ಗಿಫ್ಟ್!

ದೀಪಾವಳಿ ಹಬ್ಬದ ಬೆನ್ನಲ್ಲೇ ಲಕ್ಷಾಂತರ ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ದೀಪಾವಳಿಗೆ ಮುನ್ನವೇ ಬಂಪರ್ ಉಡುಗೊರೆಯಾಗಿ 3% ತುಟ್ಟಿ ಭತ್ಯೆ (Dearness Allowance) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಹೆಚ್ಚಳವಾಗಲಿದೆ. ಅಕ್ಟೋಬರ್ 1, 2025 ರಂದು...

RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋದಿ ಭಾಗಿ – ವಿಶೇಷ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ!

RSS 100 ವರ್ಷಗಳ ಪೂರೈಕೆಯನ್ನು ದೇಶಾದ್ಯಂತ ಭಾರೀ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದೆ. 1925 ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವವನ್ನು ತ್ಯಾಗ, ಭಕ್ತಿ ಮತ್ತು ಸ್ಥಿತಿಸ್ಥಾಪಕತ್ವದ ನಿದರ್ಶನವಾಗಿ ಆಚರಿಸುವಂತೆ ಸಂಘದ ಹಿರಿಯರು ತಿಳಿಸಿದ್ದಾರೆ. ಅಕ್ಟೊಬರ್ 1 ರಂದು ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ RSS ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮ ನಡೆದಿದೆ. ಪ್ರಧಾನಮಂತ್ರಿ...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img