ಕಳ್ಳನ ಕೃತ್ಯ ಬಿಚ್ಚಿಟ್ಟ ಸಿಸಿ ಟಿವಿ

ಹೋಟೆಲ್ ಒಂದರ ಮುಂಭಾಗದಲ್ಲಿ ನಿಲ್ಲಿಸಿದ ಡಿಯೊ ಸ್ಕೂಟರ ದ್ವಿ ಚಕ್ರವಾಹನವನ್ನು, ಹಾಡು ಹಗಲೇ ಚಾಲಾಕಿ ಕಳ್ಳನೊಬ್ಬ ಎಗರಿಸಿಕೊಂಡು ಹೋದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದ್ದು, ಕಳ್ಳನ ಕೃತ್ಯವು ಹೊಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿದ್ಯಾನಗರದ ಗುರುದತ್ತ ಭವನ ಗಾರ್ಡ್‌ನ ಹತ್ತಿರ, ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ ನಿಲ್ಲಿಸಿ ತಮ್ಮ ಬ್ಯಾಂಕಿಗ್ ಕೆಸಕ್ಕೆ ತೆರಳಿದರು. ಆದರೆ ಬೈಕ್ ನಿಲ್ಲಿಸಿದ ಜಾಗದಲ್ಲಿ ಚಾಲಕಿ ಕಳ್ಳ ತನ್ನದೇ ಸ್ವಂತ ವಾಹನ ಅನ್ನುವ ತರಹ ಬಂದು ಸ್ಥಳಿಯರಲ್ಲಿ ಯಾರಿಗೂ ಅನುಮಾನ ಬರದಂತೆ, ಎರಡು ಬಾರಿ ಬೈಕ್ ಹೆಂಡಲ್ ಅನ್ ಲಾಕ್ ಮಾಡಿಲು ಪ್ರಯತ್ನಿಸಿ ಎರಡನೇ ಬಾರಿಗೆ, ಹೆಂಡಲ್ ಅನ್ ಲಾಕ್ ಆಗುತ್ತಿದಂತೆ ಸ್ಥಳದಿಂದ ಬೈಕ್ ಎಗರಿಸಿಕೊಂಡು ಹೋಗಿದ್ದಾನೆ.

ಇನ್ನೂ ಚಾಲಕಿ ಕಳ್ಳನ ಕೃತ್ಯವು ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದ್ದು, ಈ ಕುರಿತು ಶಿವಾಜಿ ಕಾಂಬಳೆ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಈಗ ಚಾಲಾಕಿ ಕಳ್ಳನ ಬಂಧನಕ್ಕಾಗಿ ಬಲೆ ಬಿಸಿದ್ದಾರೆ.

About The Author