Sunday, September 8, 2024

Latest Posts

Praladh joshi:ಜೈನಮುನಿಗಳಿಗೆ ಸಾಂತ್ವಾನ ಹೇಳಿದ ಕೆಂದ್ರ ಸಚಿವರು

- Advertisement -

ಹುಬ್ಬಳ್ಳಿ ಬ್ರೇಕಿಂಗ್: ಹುಬ್ಬಳ್ಳಿಯ ವರೂರು ನವಗ್ರಹ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ  ಪ್ರಲ್ಹಾದ್ ಜೋಷಿಯವರು ಜೈನ್ ಮುನಿ ಕಾಮಕುಮಾರ ನಂದಿಕುಮಾರ್ ಅವರ ಹತ್ಯೆಯ ಕುರಿತು ಸ್ತಯಾಗ್ರಹ ಕೈಗೊಂಡಿರುವ ಗುಣನಂದ ನಂದಿ ಶ್ರೀಗಳನ್ನು ಭೇಟಿ ನೀಡಿ  ಸಾಂತ್ವಾನ ಹೇಳಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಷಿಯವರು ಜೈನ ಮುನಿಗಳ ಹತ್ಯೆ ಖಂಡನೀಯ ಇದು ಸರ್ಕಾರಕ್ಕೆ ಶೋಭೇ ತರುವಂತಹದಲ್ಲ ಅವರಿಗೆ ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿ ನಂತರ ದೇಹವನ್ನು ಕತ್ತರಿಸಿ ಕೊಳವೆಬಾವಿಯಲ್ಲಿ ಹಾಕಿರುವುದು ಬಹಳ ಕ್ರೂರವಾದ ಘಟನೆ. ಜೈನ ಮುನಿಗಳು ಕಾಣೆಯಾದಾಗಲೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರತಿಭಟನೆ ಮಅಡುತ್ತೇವೆ ಎಂದಾಗ ಗಂಭಿರವಾಗಿ ತೆಗೆದುಕೊಂಡಿದ್ದಾರೆ.

ಕಟ್ಟಡ ಕಟ್ಟಲು ದುಡ್ಡು ಕೊಟ್ಟಿದ್ರು ಅಂತ ಮಾಹಿತಿ ಇದೆ. ಬಡ್ಡಿ ವ್ಯವಹಾರ ಮಾಡ್ತಿದ್ರು ಅಂತ ಹೇಳಿಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ. ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲಾ. ಶಾಸಕ ಅಭಯ ಪಾಟೀಲ್ ಅವರು ತೀವ್ರವಾಗಿ ತೆಗೆದುಕೊಂಡಾಗ ಹೆಸರು ಬಿಡುಗಡೆ ಮಾಡಿದ್ರು. ತಪ್ಪು ಯಾರೇ ಮಾಡಿದ್ರು ಅಪರಾಧ. ಇದಕ್ಕೆ ಜಾತಿ ಇರಲ್ಲ. ಈ ವಿಷಯವನ್ನು ಅಮಿತ್ ಷಾ ಅವರ ಗಮನಕ್ಕೆ ತರುತ್ತೇನೆ . ಆದರೆ ರಾಜ್ಯ ಸರ್ಕಾರಗಳು ಗಮನಕ್ಕೆ ತೆಗೆದುಕೊಳ್ಳಬೇಕು. ಸದ್ಯಕ್ಕೆ ಮುನಿಗಳು ಉಪವಾಸ ಬಿಡಬೇಕು ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನ್ಯಾಯ ಸಿಗದಿದ್ದಲ್ಲಿ  ಎಲ್ಲರು ಪ್ರತತಿಭಟನೆ ಮಾಡೋಣ ಎಂದಿದ್ದಾರೆ.

 

Laxmi Hebbalkar : ನೊಂದ ಮಹಿಳೆಗೆ ಕೇವಲ ಐದು ಗಂಟೆಗಳ ಒಳಗೆ ವಿಧವಾ ವೇತನ ಮಂಜೂರು ಮಾಡಿಸಿದ ಸಚಿವೆ..!

Siddaramaiha : ಕನ್ನಡಿಗರನ್ನು ರಕ್ಷಿಸಲು ನೆರವು- ಸಿಎಂ ನಿರ್ದೇಶನ

Buntwala : ಭೀಕರ ಮಳೆಯಿಂದಾಗಿ ಅನೇಕ ಮನೆಗಳಿಗೆ ಅಪಾರ ಹಾನಿ

- Advertisement -

Latest Posts

Don't Miss