Wednesday, June 18, 2025

Latest Posts

Chikkaballapur : ಸಂಸದ ಸುಧಾಕರ್ ಬಣಕ್ಕೆ ಗೆಲುವು : ಕಾಂಗ್ರೆಸ್ ಶಾಸಕರಿಗೆ ಮುಖಭಂಗ

- Advertisement -

ಚಿಕ್ಕಬಳ್ಳಾಪುರ ಅಂದ್ರೆ ನೆನಪಾಗೋದೇ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ.ಸುಧಾಕರ್. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಸುಧಾಕರ್, ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಗೊತ್ತೆ ಇದೆ. ಇದೀಗ ಚಿಕ್ಕಬಳ್ಳಾಪುರದ ಪಿಎಲ್​ಡಿ ಬ್ಯಾಂಕ್ ಚುನಾವಣೆಯಲ್ಲೂ ಸುಧಾಕರ್ ಬಣ ಗೆಲುವು ಸಾಧಿಸಿದೆ, ಕಾಂಗ್ರೆಸ್ ಶಾಸಕರು ಮುಖಭಂಗ ಅನುಭವಿಸಿದ್ದಾರೆ.

ಪಿಎಲ್​ಡಿ ಬ್ಯಾಂಕ್​ನ ಹಿಂದಿನ ಅಧ್ಯಕ್ಷ ಕಾಳೇಗೌಡ ವೈಯಕ್ತಿಕ ಕಾರಣಗಳ ಹಿನ್ನಲೆ ರಾಜೀನಾಮೆ ನೀಡಿದ್ದರಿಂದ, ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಸುಧಾಕರ್ ಬಣದ ಗಂಗರೆಕಾಲುವೆ ಪ್ರಸಾದ್ ಅವಿರೋಧ ಆಯ್ಕೆಯಾಗಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಈ ವೇಳೆ ಮಾತನಾಡಿದ ಸುಧಾಕರ್, ರಾಜ್ಯದಲ್ಲೇ ಅತ್ಯುತ್ತಮವಾಗಿ ನಡೆಯುತ್ತಿರುವ ಭೂ ಅಭಿವೃದ್ಧಿ ಬ್ಯಾಂಕ್​ಗಳ ಪೈಕಿ ಚಿಕ್ಕಬಳ್ಳಾಪುರ ಪಿಎಲ್​ಡಿ ಕೂಡ ಒಂದಾಗಿದೆ. ಇಲ್ಲಿ ಭ್ರಷ್ಟಾಚಾರ ರಹಿತವಾಗಿ ಕಾರ್ಯಭಾರ ನಡೆಸಬೇಕಿದೆ. ಉತ್ತಮ ಸೇವೆಯನ್ನು ಸಲ್ಲಿಸಬೇಕೆಂದು ನೂತನ ಅಧ್ಯಕ್ಷರಿಗೆ ಸಲಹೆ ನೀಡಿದ್ರು

- Advertisement -

Latest Posts

Don't Miss