www.karnatakatv.net : ರಾಯಚೂರು : ಶಾಲೆಗೆ ಶಿಕ್ಷಕರು ಬಂದಿಲ್ಲವೆoದು ಮಕ್ಕಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ರಾಯಚೂರು ನಗರ ವಾರ್ಡ್ ನಂ 33 ರ ಪೋತ್ಗಲ್ ನ ಅಮರವತಿ ಗ್ರಾಮದಲ್ಲಿ. ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಕರು ಇಲ್ಲದೇ ಇರುವ ಕಾರಣ `ಬೇಕೆ ಬೇಕು ಟೀಚರ್ ಬೇಕು’ ಎಂದು ಮಕ್ಕಳು ಪ್ರತಿಭಟನೆ ಮಾಡುತ್ತಿದ್ದಾರೆ. ಹೌದು ಕೊರೊನಾ ಸೋಂಕಿನಿoದ ರಾಜ್ಯಾದ್ಯಂತ ಶಾಲಾ ಕಾಲೇಜು ಗಳು ಬಂದಾಗಿದ್ದವು ಆದರೆ ಈಗ ಮರು ಓಪೆನ್ ಆಗಿದ್ದ ಕಾರಣ ಶಾಲೆಯತ್ತ ಮಕ್ಕಳು ಧಾವಿಸುತ್ತಿದ್ದು ಶಾಲೆಯಲ್ಲಿ ಶಿಕ್ಷಕರೇ ಇಲ್ಲದ ಕಾರಣ ಮಕ್ಕಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ರಾಜ್ಯ ಸರ್ಕಾರದ ಆದೇಶ ದ ಮೇರಿಗೆ ಇಂದು 1 ರಿಂದ 5 ತರಗತಿಯ ವರೆಗೆ ಶಾಲೆಗೆಳು ತೆರೆಯಬೇಕಿತ್ತು, ಆದರೆ ಈ ಅಮರವತಿ ಶಾಲೆಗೆ ಶಿಕ್ಷಕರೆ ಇಲ್ಲ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿತ್ತಿದ್ದಾರೆ. ಅಮರವತಿ ಗ್ರಾಮದ ಶಾಲೆಯಲ್ಲಿ ಸರಿಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ಇದುವರೆಗೆ ಶಿಕ್ಷಕರಿಲ್ಲದೇ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಎಂದು ಇಂದು ಗ್ರಾಮದ ಸಾರ್ವಜನಿಕರು ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಟಿಪ್ಪುಸುಲ್ತಾನ್ ಗೋರ್ಡಾನ್ ಪ್ರತಿಭಟನೆ ನಡೆಸುತ್ತಿದಾರೆ. ಡಿಡಿಪಿಐ ಹಾಗೂ ಬಿಓ ವಿರುದ್ಧ ಘೋಷಣೆ ಕೂಗಿದ್ದಾರೆ. ಇನ್ನೂ ಮಕ್ಕಳ ಕೂಗಿಗೆ ಅಧಿಕಾರಿಗಳು ಸ್ಪಂದನೆ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು