Saturday, November 15, 2025

Latest Posts

‘ಯದ್ಬವಂ ತದ್ಬವತಿ’ ಚಲನಚಿತ್ರಕ್ಕೆ ಅಮಿತ್ ರಾವ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ

- Advertisement -

ಮೈಸೂರು: ಮೈಸೂರ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅಮಿತ್ ರಾವ್  ನಿರ್ದೇಶನ ಮಾಡಿ ನಟಿಸಿರುವ  ‘ಯದ್ಭವಂ ತದ್ಭವತಿ’ ಕನ್ನಡ ಚಲನಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯಿತು. ನವೆಂಬರ್ 20 ರಂದು ನಮ್ಮ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರ ಮೈಸೂರುನಲ್ಲಿ ನಡೆದ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ನಿರ್ದೇಶಕರಾದ  ಅಮಿತ್ ರಾವ್ ರವರಿಗೆ ನೀಡಲಾಯಿತು.

ಮಂಗಳೂರು ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣ : ಬೆಂಗಳೂರಿಗೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

ಬಿಸಿಡಿ ಸ್ಟುಡಿಯೋಸ್ ಸಂಸ್ಥೆ ಇಂದ ನಿರ್ಮಾಣವಾಗಿರುವ ಚಿತ್ರ ತೆರೆ ಕಾಣಲು ಸಿದ್ಧವಿರುವ “ಯದ್ಭಾವಂ ತದ್ಭವತಿ” ಕನ್ನಡ ಚಲನಚಿತ್ರಕ್ಕೆ ನಟ ನಿರ್ದೇಶಕರಾದ  ಅಮಿತ್ ರಾವ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈಗಾಗಲೇ ಒಂದಷ್ಟು ಬೇರೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 53 ಪ್ರಶಸ್ತಿಗಳನ್ನು ಪಡೆದುಕೊಂಡಿರುವ ‘ಯದ್ಬವಂ ತದ್ಬವತಿ’ ಚಿತ್ರಕ್ಕೆ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಅತ್ಯುತ್ತಮ ನಟ  54ನೇ ಪ್ರಶಸ್ತಿಯಾಗಿ ಸೇರ್ಪಡೆಗೊಂಡಿದೆ.

ಬೆಂಗಳೂರಿನಲ್ಲಿ 86 ರೌಡಿಶೀಟರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ

ಚಿತ್ರದಲ್ಲಿ  ಅಮಿತ್ ರಾವ್  ಅವರೇ ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಛಾಯಾಗ್ರಾಹಕರಾಗಿ  ಸುದೀಪ್ ಫ್ರೆಡ್ರಿಕ್, ಸಂಗೀತ ನಿರ್ದೇಶಕ ರಾಕಿ ಸೋನು, ಸಂಕಲನ ಶಿವರಾಜ್ ಮೆಹು , ಸಾಹಿತ್ಯ ನವೀನ್ ರೈ, ಸಹ ನಿರ್ಮಾಪಕರಾಗಿ R ಶ್ರೀನಿವಾಸ ಶೆಟ್ಟಿ, ನಿರ್ಮಾಪಕ ಮಂಜುನಾಥ್ ದೈವಜ್ಞ ತಂಡದಲ್ಲಿ ಇದ್ದಾರೆ.

ಹಿಂದಿನ ಕಾಲದ ಸುಂದರಿಯರು ಇದೇ ಸೌಂದರ್ಯ ಸಲಹೆಗಳನ್ನು ಪಾಲಿಸುತ್ತಿದ್ದರು..

ನಮ್ಮ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರಿ  ಹೆಸರುವಾಸಿಯಾದ ಮೈಸೂರ್ ನಲ್ಲಿ ನಡೆದ ಮೈಸೂರ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ  ಅತ್ಯುತ್ತಮ ನಟ  ಪ್ರಶಸ್ತಿ ನನ್ನ ನಟನೆಗೆ ನೀಡಿದ್ದು, ಹೊರ ರಾಜ್ಯಗಳಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಛಾಯಾಗ್ರಹ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ಕಥೆ, ಹೀಗೆ ಹಲವಾರು ಪ್ರಶಸ್ತಿಗಳು ಸಿಕ್ಕಿದ್ದರೂ, ನಮ್ಮ ಕನ್ನಡದ ನೆಲದಲ್ಲಿ ನಮ್ಮ ಸಿನಿಮಾಗೆ ಸಿಕ್ಕ ಮೊದಲ ಪ್ರಶಸ್ತಿ ಯಾಗಿದ್ದು, ನನ್ನ ಹೃದಯಕ್ಕೆ ಹತ್ತಿರವಾದ ಪ್ರಶಸ್ತಿ ಆಗಿದೆ  ಮತ್ತು ನನಗೆ ಹೆಮ್ಮೆಯ ವಿಷಯ ಎಂದು  ನಟ ನಿರ್ದೇಶಕ ಅಮಿತ್ ರವರು ಹೇಳಿದ್ದಾರೆ.

ಹೀಗೆ ಸ್ನಾನ ಮಾಡಿದರೆ ತ್ವಚೆಯ ಸಮಸ್ಯೆ ಕಾಡುತ್ತದೆ..!

ನಿಮ್ಮ ಮುಖಕ್ಕೆ ನಿಂಬೆ ರಸ ಮತ್ತು ಅರಿಶಿನವನ್ನು ಹಾಕುತ್ತಿದ್ದಿರಾ..?

- Advertisement -

Latest Posts

Don't Miss