ಹಾಸನ: ಮಂಗಳೂರು ಬ್ಲಾಸ್ಟ್ ನಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಇದರಲ್ಲಿ ಗುಪ್ತಚರ ಇಲಾಕೆ ಎನ್ನುವ ಪ್ರಶ್ನೆ ಇಲ್ಲ, ಎಲ್ಲಾ ಕಾಲದಲ್ಲೂ ಇಂತಹ ಘಟನೆಗಳು ನಡೆದಿವೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚೋದಿತರಾಗಿರುತ್ತಾರೆ ಬಹಳಷ್ಟು ಜನರು ಬಾಂಗ್ಲಾದೇಶದಿಂದ ಬಂದಿದ್ದಾರೆ. ಅವರಲ್ಲಿ ಸಾಕಷ್ಟು ಜನರನ್ನು ಗುರುತಿಸಿ ಗಡಿಗೆ ಬಿಟ್ಟು ಬರಲಾಗಿದೆ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಗಡಿಯಲ್ಲಿ ಸಾಕಷ್ಟು ಮುಕ್ತವಾಗಿ ಜನರನ್ನು ಬಿಟ್ಟಿದೆ. ಘಟನೆ ಹಿಂದೆ ಈ ರೀತಿಯ ಹತ್ತು ಹಲವು ಕಾರಣಗಳು ಇರುತ್ತವೆ, ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಆದರೆ ರಾಜಕೀಯ ಕಾರಣಕ್ಕೆ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ಬೇಲೂರು ತಾಲ್ಲೂಕಿನ ಹಳೆಬೀಡಿನಲ್ಲಿ ಸಿಎಂ ಅವರು ಸಿದ್ದರಾಮಯ್ಯನವರಿಗೆ ಟೀಕೆ ಮಾಡಿದ್ದಾರೆ.
ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇ ಪ್ರಯಾಣಕ್ಕೆ ಅನುಮತಿ ಇಲ್ಲ
ಇಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯವಶ್ಯಕ : ಮಾಜಿ ಸಿಎಂ ಸಿದ್ದರಾಮಯ್ಯ
ಕೆಆರ್ ಎಸ್ ಬೃಂದಾವನ ಪ್ರವೇಶಕ್ಕೆ ನಿರ್ಬಂಧ : ವ್ಯಾಪರಸ್ಥರಿಗೆ, ಕಾವೇರಿ ನೀರಾವರಿ ನಿಗಮಕ್ಕೆ ನಷ್ಟ