ಹಾಸನ: ಏನೇ ಟೀಕೆ ಮಾಡಿದರೂ ಸಿಎಂ ಅದನ್ನು ಲಘುವಾಗಿ ಪರಿಗಣಿಸುತ್ತಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯಾರು ಏನು ಮಾತಾಡುತ್ತಾರೆ ಎನ್ನುವುದನ್ನು ಜನ ತೀರ್ಮಾನ ಮಾಡ್ತಾರೆ. ಸತ್ಯ ಏನೆಂದು ಎಲ್ಲರಿಗೂ ಗೊತ್ತಾಗುತ್ತದೆ. ಅವರ ಕಾಲದಲ್ಲಿ ನಡೆದಿದ್ದರ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಿದ್ದೇವೆ ಅದು ಸತ್ಯ ಅಲ್ಲವಾ? ಸತ್ಯವನ್ನು ಎದುರಿಸುವ ಕೆಲಸವನ್ನು ಅವರು ಮಾಡಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಅದಬಿಟ್ಟು ನಮ್ಮ ಕಾಲದಲ್ಲಿ ಆಗಿಲ್ಲ,ಆಗಿದ್ದರೆ ಏನಾಯ್ತು ಎನ್ನುವುದು ಜವಾಬ್ದಾರಿಯುತ ಹೇಳಿಕೆ ಅಲ್ಲ. ನಾವು ಏನು ಹೇಳಿಧ್ದೇವೊ ಅದರ ದಾಖಲೆ ಕೊಡುತ್ತಿದ್ದೇವೆ ಎಂದು ಸಿಎಂ ಅವರು ಹಳೆಬೀಡಿನ ಪುಷ್ಪಗಿರಿ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾಗ ಹೇಳಿಕೆ ನೀಡಿದ್ದಾರೆ.
ನೀವು ಉಗುರುಗಳನ್ನು ಕಚ್ಚುತ್ತೀರಾ..? ಈ ಸಲಹೆಗಳೊಂದಿಗೆ ಅಭ್ಯಾಸವನ್ನು ಬಿಟ್ಟುಬಿಡಿ..!