Friday, March 29, 2024

Latest Posts

‘ಸಿದ್ಧಾರ್ಥ್ ದುಡುಕಿಬಿಟ್ಟರು, ಯಾರಾದ್ರೂ ಜೊತೆಗಿದಿದ್ದರೆ ಹೀಗಾಗುತ್ತಿರಲಿಲ್ಲ’- ಸಿಎಂ ಯಡಿಯೂರಪ್ಪ ವಿಷಾದ

- Advertisement -

ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ್ ಸಾವಿಗೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿದ್ಧಾರ್ಥ್ ದುಡುಕಿನ ನಿರ್ಧಾರ ತೆಗೆದುಕೊಂಡುಬಿಟ್ಟರು ಅಂತ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ.

ಉದ್ಯಮಿ ಸಿದ್ಧಾರ್ಥ್ ಸಾವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆಗರ್ಭ ಶ್ರೀಮಂತರಾಗಿದ್ದ ಉದ್ಯಮಿ ಸಿದ್ಧಾರ್ಥ್ ಈ ರೀತಿ ನಿರ್ಧಾರ ತೆಗೆದುಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿ. ಉದ್ಯಮಿಯಾಗಿ ವಿಶ್ವಖ್ಯಾತಿ ಪಡೆದಿದ್ದ ಸಿದ್ಧಾರ್ಥ್ ದುಡಿಕಿಬಿಟ್ಟರು, ದುಡಿಕಿನ ನಿರ್ಧಾರ ತೆಗೆದುಕೊಂಡಿದ್ದ ಅವರ ಜೊತೆಗೆ ಸಾಂತ್ವನ ಹೇಳಲು ಯಾರಾದರೂ ಒಬ್ಬರಿದ್ದಿದ್ದರೆ ಅವರು ಸಾವನ್ನಪ್ಪುತಿರಲಿಲ್ಲ ಅಂತ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ರು.

ಬಳಿಕ ಮಾತನಾಡಿದ ಸಿಎಂ ಬಿಎಸ್ವೈ ಸಿದ್ಧಾರ್ಥ್ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಹಾಗೇ ಕುಟಂಬಸ್ಥರಿಗೆ ನೋವು ಸಹಿಸಿಕೊಳ್ಳೋ ಶಕ್ತಿ ನೀಡಲಿ ಅಂತ ಹೇಳಿದ್ರು, ಅಲ್ಲದೆ ತಾವೂ ಕೂಡ ಅಂತ್ಯಕ್ರಿಯೆಯಲ್ಲಿ ಭಾಗಿಯಾಗೋದಾಗಿ ಇದೇ ವೇಳೆ ಯಡಿಯೂರಪ್ಪ ತಿಳಿಸಿದ್ರು.

- Advertisement -

Latest Posts

Don't Miss