Dharwad News: ಧಾರವಾಡ: ಶಾಸಕ ಅರವಿಂದ ಬೆಲ್ಲದ್ ಧಾರವಾಡದಲ್ಲಿ ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಅವರು 4 ಸಾವಿರದಿಂದ 5 ಸಾವಿರ ಕೋಟಿಯಷ್ಡು ಮುಡಾ ಹಗರಣ ಮಾಡಿದ್ದಾರೆ. ಭ್ರಷ್ಟ ಸಿಎಂ ಸಿದ್ದರಾಮಯ್ಯ. ಕೇವಲ ಅವರಿಗೆ ಸೇರಿದ್ದು 14 ಸೈಟ್ ಅಲ್ಲದೆ 700 ರಿಂದ 800 ಸೈಟ್ ಗಳನ್ನ ತಮಗೆ ಬೇಕಾದವರಿಗೆ ಕೊಡಸಿದ್ದಾರೆ. ಸದ್ಯ ರಾಜ್ಯಪಾಲರು ತನಿಖೆಗೆ ಆದೇಶ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ರಾಜಿನಾಮೆ ಕೊಡಬೇಕು ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಸಮಾಜ ಸೇವೆಯಿಂದ ರಾಜ್ಯಪಾಲರಾಗಿದ್ದಾರೆ. ರಾಜ್ಯ ಪಾಲರಿಗೆ ಪರ್ಸನಲ್ ಆಗಿ ಅಟ್ಯಾಕ್ ಮಾಡುತ್ತಿದ್ದಾರೆ. ಕೈ ಸಚಿವರುಗಳಿಂದ ಪ್ರಚೋದಾನಾತ್ಮಕ ಹೇಳಿಕೆಯನ್ನ ಸಿಎಂ ಕೊಡಿಸುತ್ತಿದ್ದಾರೆ. ಇವತ್ತು ಪ್ರತಿಭಟನೆ ಮಾಡಿದ್ದೇವೆ. ಕೈ ಸರಕಾರ ವಿಚಾರಣೆಗೆ ಅವಕಾಶ ಕೊಡಬೇಕು. ಭ್ರಷ್ಟ ಸಿಎಂ ಅವರನ್ನ ಕೆಳಗಿಳಿಸಿ ಪ್ರಾಮಾಣಿಕರನ್ನ ಸಿಎಂ ಮಾಡಬೇಕು. ವಿಚಾರಣೆ ಹೊರಗೆ ಬಂತು ಬೈರತಿ ಸುರೇಶ ಹೆಲಿಕ್ಯಾಪ್ಡರ್ ಮುಖಾಂತರ ಮೈಸೂರಿಗೆ ಹೋಗಿದ್ದಾರೆ. ಅಲ್ಲಿರುವ ಎಲ್ಲ ದಾಖಲಾತಿಗಳನ್ನ ತೆಗೆದುಕೊಂಡು ಬಂದಿದ್ದಾರೆ. ಸದ್ಯ ಒಂದೆರಡು ದಾಖಲಾತಿಗಳು ಮಾದ್ಯಮಗಳ ಕೈಗೆ ಸಿಕ್ಕಿವೆ. ಅದಕ್ಕೂ ವೈಟ್ನರ್ ಹಚ್ಚಿ ಪ್ರಕರಣವನ್ನ ತಿರುಚುತಿದ್ದಾರೆ. 29 ರಂದು ರಾಜ್ಯಪಾಲರ ನಿಲುವನ್ನು ಎತ್ತಿ ಹಿಡಿಯುತ್ತಿದೆ.
ಸಿಎಂ ತಪ್ಪು ಮಾಡಿಲ್ಲ ಅನ್ನೋದಕ್ಕೆ ಕ್ಯಾಬಿನೆಟ್ಗೆ ಹಕ್ಕಿಲ್ಲ. ಆಗಷ್ಟ್ 29 ರಂದು ಕೋರ್ಟ ರಾಜ್ಯಪಾಲರ ಆದೇಶವನ್ನ ಎತ್ತಿ ಹಿಡಿಯುತ್ತೆ, ಸಿಎಂ ಅವರಿಗೆ ರಾಜಿನಾಮೆ ಕೊಡೋದು ಬಿಟ್ಟು ಬೇರೆ ದಾರಿನೇ ಇಲ್ಲ. ಯಾವುದೇ ಹರಗಣಗಳಿದ್ದರೂ ಎಲ್ಲವೂ ತನಿಖೆ ಆಗಲಿ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.