- Advertisement -
Hubli News: ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜ್ಯದಲ್ಲಿ ಮೀತಿಮೀರಿದೆ. ನೆಲಮಂಗಲ ಕೋಮುಗಲಭೆಯಲ್ಲಿ ಆರೋಪಿಗಳ ಬಂಧನದಲ್ಲಿ ಸರ್ಕಾರದ ಕ್ರಮವೇ ತಿಳಿಯುತ್ತದೆ. ಎ-1 ಆರೋಪಿ ಹಾಗೂ ಎಲ್ಲ ಆರೋಪಿಗಳು ಹಿಂದುಗಳೇ ಆಗಿದ್ದಾರೆ. ಈ ಗಲಭೆಗೆ ಮುಖ್ಯ ಕಾರಣ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಎಂದು ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುನಿರತ್ನರ ಬಂಧನದಿಂದ ರಾಜ್ಯ ಸರ್ಕಾರದ ದ್ವೇಷ ರಾಜಕಾರಣ ಎಷ್ಟೀದೆ ಎಂದು ಗೊತ್ತಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷದ ರಾಜಕಾರಣ ಮಾಡುತ್ತಿದೆ. ಈಗಾಗಲೇ ಶಾಸಕ ಮುನಿರತ್ನ ಅವರು ಪ್ರಕರಣದ ಬಗ್ಗೆ ಮಾತಾಡಿದ್ದಾರೆ. ಅವರು ತಪ್ಪು ಮಾಡಿಲ್ಲವೆಂದು ಹೇಳಿದ್ದಾರೆ. ಆದರೂ ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕಾಗಿ ಮುನಿರತ್ನರನ್ನು ಬಂಧಿಸಿದೆ ಎಂದರು.
- Advertisement -