Sunday, September 8, 2024

Latest Posts

ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ 

- Advertisement -

ಜನವರಿ ರಂದು ಹಮ್ಮಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀ ನಗರದಲ್ಲಿ ಭಾರತ ಐಕ್ಯತೆ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೋಳ್ಳುವಂತೆ ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡ ಅವರ ನೇತೃತ್ವದ ಜೆಡಿಎಸ್ ಗೆ ಆಹ್ವಾನ ನೀಡಿದೆ .
ಆದರೆ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿ ಆರ್ ಎಸ್ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಆಹ್ವಾನ ನೀಡಿಲ್ಲ .
ಈ ಹಿಂದೆ ನೀಡಿದ ಹೊರಡಿಸಿದ್ದ 21 ಆಹ್ವಾನಿತ ಸಮಾನ ಮನಸ್ಕ ಪಕ್ಷಗಳು ಪಟ್ಟಿಯಲ್ಲಿ ಕರ್ನಾಟಕದ ಜನತಾದಳ ಪಕ್ಷಕ್ಕೆ ಆಹ್ವಾನ ಇರಲಿಲ್ಲ.
ಆದರೆ ಈ ಬಾರಿಯ ಸಮಾನ ಮನಸ್ಸಿನ ಪಕ್ಷಗಳಲ್ಲಿ ಜೆಡಿಎಸ್ ಗೆ ಆಹ್ವಾನ ನೀಡಿದ ಕಾರಣ ಒಟ್ಟು 23ಪಕ್ಪದ ನಾಯಕರಿಗೆ ಆಹ್ವಾನ ದೊರೆತಂತಾಗಿದೆ
ಈ ಹಿಂದೆ ಅಂದರೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಿಶ್ರ ಪಕ್ಷವಾಗಿದ್ದವು.
ಈ ಹಿಂದೆ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆದಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿಯು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ ಈ ದಿನದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಆಹ್ವಾನ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾರಿಗೆ ಸಚಿವ ಶ್ರೀರಾಮುಲು ಗೆ ಐಟಿ ಶಾಕ್..!

ಡಾಲಿ ಧನಂಜಯ್ ಸಿನಿಮಾ ಮೂಲಕ ರಮ್ಯಾ ಕಮ್​ ಬ್ಯಾಕ್…!

“ರಾಜ್ಯಕ್ಕೆ ಮೋದಿ ನೂರು ಬಾರಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ “: HDK

- Advertisement -

Latest Posts

Don't Miss