Sunday, September 8, 2024

Latest Posts

Basavakalyana MLA: ಅಕ್ರಮ ಗೋವುಗಳ ಸಾಗಾಟ ತಡೆದ ಶಾಸಕ ಶರಣು ಸಲಗರ್..!

- Advertisement -

ಬೀದರ್ ಬ್ರೆಕಿಂಗ್ : ಒಂದೆ ವಾಹನದಲ್ಲಿ 12 ಕ್ಕಿಂತ ಹೆಚ್ಚು ದನಕರುಗಳನ್ನು ತಳ್ಳಿ ಸಾಗಾಟ ಮಾಡುತ್ತಿದ್ದ ಕಿರಾತಕರನ್ನು ಗ್ರಾಮಸ್ಥರು ತಡೆದು ನಂತರ ಬಸವ ಕಲ್ಯಾಣದ ಬಿಜೆಪಿ ಶಾಸಕನಿಗೆ ತಿಳಿಸಿದ್ದಾರೆ.ನಂತರ ಸ್ಥಳಕ್ಕೆ ಆಗಮಿಸಿದ ಶಾಸಕರು ಗೋವುಗಳನ್ನು ರಕ್ಷಿಸಿದ್ದಾರೆ.

ಮತ್ತೊಂದು ಅತಿ ಸಣ್ಣ ವಾಹನ ಆರು ದನಕರುಗಳನ್ನು ಹಿಂಸೆಯಾಗುವಂತೆ ತುಂಬಿಸಿ ಸಾಗಾಟ ಮಾಡುತ್ತಿದ್ದರು ಆಕ್ರಮ ಗೋವು ಸಾಗಾಟ ಮಾಡುತ್ತಿದ್ದ ಎರೆಡು ವಾಹನಗಳನ್ನು ಬಸವಕಲ್ಯಾಣ ತಾಲೂಕಿನ ಬೆಟ ಬಾಲಕುಂದಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಸ್ಥಳಿಯರು ತಡೆದಿದ್ದಾರೆ. ನಂತರ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶರಣು ಸಲಗರ್ ಗೋವುಗಳನ್ನು ಸ್ಥಳೀಯರ ಸಹಾಯದಿಂದ ಕೆಳಗಿಳಿಸಿದ್ಧಾರೆ. ರೈತರ ಜಮೀನಿನಿಂದ ದನಕರುಗಳಿಗೆ ತಿನ್ನಲು ಮೇವನ್ನು ತರಿಸಿ ಖೂದ್ಧು ಗೋವುಗಳಿಗೆ ತಿನ್ನಲು ಮೇವನ್ನು ಹಾಕಿದರು

ನಂತರ ಪಶು ವೈದ್ಯಾಧಿಕಾರಿ ಹಾಗು ಪೊಲಿಸ್ ಅಧಿಕಾರಿಗಳಿಗೆ ಕರೆಸಿ ಕೂಡಲೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೆಕು ಮತ್ತು ಗೋವುಗಳನ್ನು ಗೋಶಾಲೆಗೆ ಕಳುಹಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು. ಮಾಧ್ಯಮದ ಜೊತೆ ಮಾತನಾಡಿದ ಅವರು ಶರಣರ ನಾಡಿನಲ್ಲಿ ಅಕ್ರಮ ಗೋಹತ್ಯೆ ಹಾಗು ಗೊಸಾಗಾಣೆಯಂತಹ ಅಮಾನವಿಯ ಕೃತ್ಯ ನಡೆಯುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ಮರುಗಿದರು.

ನಾನು ಬದುಕಿರುವವರೆಗೂ ಶರಣರ ನಾಡಿನಲ್ಲಿ ಗೋಹತ್ಯೆ ಮಾಡಲು ಬಿಡುವುದಿಲ್ಲ ಈ ಹಿಂದೆ ಬಸವಕಲ್ಯಾಣ ನಗರದಲ್ಲಿ ಗೋಹತ್ಯೆಯನ್ನು ತಡೆಯಲು ಹೋದಾಗ ನನ್ನ ಮೇಲೆಯೇ ಪ್ರಕರಣ ದಾಖಲಾಗಿತ್ತು. ಅದೆಷ್ಟೇ ನನ್ನನ್ನು ಕುಗ್ಗಿಸಲು ಪ್ರಯತ್ನಿಸಿದರು ನನ್ನ ಕೊನೆ ಉಸಿರು ಇರುವವರೆಗೂ ಗೊರಕ್ಷಣೆಗಾಗಿ ತೊಡೆ ತಟ್ಟಿ ನಿಲ್ಲುತ್ತೇನೆ ಎಂದು ತಿಳಿಸಿದರು.

Siddaramaiah: ಕಾಂಗ್ರೆಸ್ ಪಕ್ಷದ ಗೆಲುವು ಬಿಜೆಪಿಯ ಭಯಕ್ಕೆ ಕಾರಣ

ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?

ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..

- Advertisement -

Latest Posts

Don't Miss