Tuesday, April 1, 2025

Latest Posts

Rahul Gandhi ; ರಾಹುಲ್ ಗಾಂಧಿ ವಿರುದ್ಧ FIR : ಶುರುವಾಯ್ತು ಹೊಸ ಸಂಕಷ್ಟ

- Advertisement -

ಆಡಳಿತ – ಪ್ರತಿಪಕ್ಷಗಳ ನಡುವೆ ಸೈದ್ಧಾಂತಿಕ ಹಾಗೂ ರಾಜಕೀಯ ಸಮರಕ್ಕೆ ನಡೀತಾನೆ ಇರುತ್ತೆ. ಅದೇ ರೀತಿ ಗುರುವಾರ ಹಿಂದೆಂದೂ ಕಂಡುಕೇಳರಿಯದ ಆಘಾತಕಾರಿ ಘಟನೆಗಳಿಗೆ ಸಂಸತ್ ಭವನ ಸಾಕ್ಷಿಯಾಗಿದೆ. ಹಾಗಾದರೆ ಏನಾಗಿತ್ತು ಅಂತಾ ನೊಡೊದಾದ್ರೆ…. ಬಿ.ಆರ್ ಅಂಬೇಡ್ಕರ್ ಗೆ ಅವಮಾನ ಮಾಡಿದ ಆರೋಪದ ಮೇಲೆ ಸಂಸತ್ ಭವನದೊಳಗೆ ವಿರೋಧ ಪಕ್ಷದ ಸಂಸದರು ಮತ್ತು ಬಿಜೆಪಿ ಸದಸ್ಯರ ನಡುವೆ ಘರ್ಷಣೆಯಾಯ್ತು. ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿರಿಯ ಸಂಸದರನ್ನು ತಳ್ಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ರಾಹುಲ್ ಗಾಂಧಿ ಆ ಆರೋಪವನ್ನು ನಿರಾಕರಿಸಿದರು. ಆಡಳಿತ ಪಕ್ಷದ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡಿದರು.

ಇಂಡಿಯಾ ಒಕ್ಕೂಟದ ಸಂಸದರು ಸಂಸತ್ ನ ಮುಖ್ಯ ಪ್ರವೇಶದ್ವಾರದ ಬಳಿ ಘರ್ಷಣೆ ನಡೆಸಿದರು. ಪ್ರತಿಭಟಣೆ ನೆಡೆಸುತ್ತಿದ್ದ ಬಿಜೆಪಿ ಸಂಸದರು ಆಕ್ರಮಿಸಿಕೊಂಡಿರುವ ಪ್ರದೇಶ ಮೂಲಕ ಸಂಸತ್ತಿಗೆ ಪ್ರವೇಶಿಸಲು ಇಂಡಿಯಾ ಬ್ಲಾಕ್ ಪ್ರಯತ್ನಿಸಿತು . ಮೆಟ್ಟಿಲುಗಳ ಖಾಲಿ ಭಾಗವನ್ನು ಬಳಸುವ ಬದಲ, ಪ್ರತಿಪಕ್ಷ ನಾಯಕರು ಬಿಜೆಪಿ ಸಂಸದರ ನಡುವಲ್ಲೇ ನುಗ್ಗಿದರು. ಇದರಿಂದ ತಳ್ಳಾಟ ಉಂಟಾಯಿತು. ಈ ವೇಳೆ ಒಡಿಶಾದ ಬಿಜೆಪಿ ಸಂಸದರಾದ 69 ವರ್ಷದ ಸಾರಂಗಿ ಅವರಿಗೆ ಗಾಯಗಳಾಗಿವೆ. ಸಂಸತ್ ಆವರಣದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ರಾಮ್ ಮನೋಹರ್ ಆಸ್ಪತ್ರೆಗೆ ಸಾಗಿಸಲಾಯಿತು.ಬಿಜೆಪಿ ಸಂಸದ ಮುಖೆಶ್ ರಜಪೂತ್ ಕೂಡಾ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ.

 

ಪಾರ್ಲಿಮೆಂಟ್​ನ ಸದನದ ಪ್ರವೇಶದ ಮೆಟ್ಟಿಲುಗಳಲ್ಲಿ ಪ್ರತಿಪಕ್ಷಗಳು ಮತ್ತು ಎನ್‌ಡಿಎ ಸಂಸದರ ನಡುವಿನ ವಾಗ್ವಾದ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಇಂದು ಕೇಸ್ ದಾಖಲಿಸಿದ್ದಾರೆ. ಇಂದು ಸಂಸತ್ತಿನ ಆವರಣದಲ್ಲಿ ದೈಹಿಕ ಹಲ್ಲೆ ಮತ್ತು ಪ್ರಚೋದನೆ ಆರೋಪದಡಿ ರಾಹುಲ್ ಗಾಂಧಿ ವಿರುದ್ಧ ಅನುರಾಗ್ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಸೇರಿದಂತೆ ಬಿಜೆಪಿ ಸಂಸದರು ದೂರು ಸಲ್ಲಿಸಿದ್ದರು. ಕೊಲೆ ಯತ್ನ ಮತ್ತು ಇತರ ಆರೋಪಗಳ ಅಡಿಯಲ್ಲಿ ದೂರು ನೀಡಿದ್ದರು.

ಭಾರತೀಯರ ಸೆಕ್ಷನ್ 117 ಅಂದರೆ ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನುಂಟುಮಾಡುವುದು, 125 ಅಂದರೆ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ, 131 ಅಂದರೆ ಅಪರಾಧ ಬಲದ ಬಳಕೆ, 351 ಅಂದರೆ ಅಪರಾಧದ ಬೆದರಿಕೆ ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

- Advertisement -

Latest Posts

Don't Miss