ಮಂಡ್ಯ: ನಾವು ರಾಜಕೀಯದಲ್ಲಿ ಇರುವವರು ಮೊಟ್ಟೆ, ಕಪ್ಪು ಬಾವುಟ, ಚಪ್ಪಲಿಗೆ, ಹೂವಿನ ಹಾರಕ್ಕೆ ಎದರುತ್ತೇವೆ ಎಂದರೆ ತಪ್ಪು. ಇದಕ್ಕೆಲ್ಲಾ ತಯಾರಾಗೆ ನಾವು ರಾಜಕೀಯಕ್ಕೆ ಬಂದಿರುತ್ತೇವೆ. ಮೊಟ್ಟೆ ಎಸೆದ ಹುಡುಗರಿಗೆ ನಾನು ಏನು ಹೇಳುವುದಿಲ್ಲ. ಬಿಜೆಪಿ ನಾಯಕರು ಇವರೇ ಮಾಡಿಸುತ್ತಾರೆ ಎಂದು ಹೇಳಿದ್ರೆ ಏನು ಪ್ರಯೋಜನವಿಲ್ಲ. ನಾನು ಮುಖ್ಯಮಂತ್ರಿಗಳಿಗೆ ಹೇಳುವುದು ನಿಮ್ಮ ಪಕ್ಷದ ಕಾರ್ಯಕರ್ತರನ್ನು ಹದ್ದುಬಸ್ತಲ್ಲಿ ಇಟ್ಟುಕೊಂಡ್ರೆ ನಿಮಗೆ ಕ್ಷೇಮ. ನಾನು ಪ್ರಚೋದನೆ ನೀಡುತ್ತಿಲ್ಲ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ದರಾಮಯ್ಯ ಅವರು ಸಂವಿಧಾನ ಬದ್ದವಾಗಿ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಗಿದೆ. ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಆ ಸ್ಥಾನ ಮಾನ ನೀಡಲಾಗಿದೆ. ಸರ್ಕಾರದ ಆಡಳಿತ ಸಮಾಧಾನ ಇಲ್ಲದ ಕಾರಣ ಅವರು ರಾಜ್ಯದ್ಯಾಂತ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಸಿದ್ಧರಾಮಯ್ಯ ಅವರ ಹೇಳಿಕೆಗಳು ಬಿಜೆಪಿ ಅವರಿಗೆ ಸಮಾಧಾನ ಆಗದೇ ಇರಬಹುದು. ಆ ಕುರಿತು ನೀವು ಟೀಕೆ ಮಾಡಿ. ಟೀಕೆಯನ್ನು ಸಂತೋಷದಿಂದ ಸ್ವೀಕಾರ ಮಾಡಲು ಸಿದ್ದರಿದ್ದೇವೆ. ಅದನ್ನು ಬಿಟ್ಟು ಮೊಟ್ಟೆ ಎಸೆಯುವುದು, ಕಪ್ಪು ಬಾವುಟ ಹಿಡಿಯುವುದು. ನಾವು ರಾಜಕೀಯದಲ್ಲಿ ಇರುವವರು ಮೊಟ್ಟೆ, ಕಪ್ಪು ಬಾವುಟ, ಚಪ್ಪಲಿಗೆ, ಹೂವಿನ ಹಾರಕ್ಕೆ ಎದರುತ್ತೇವೆ ಎಂದರೆ ತಪ್ಪು. ಇದಕ್ಕೆಲ್ಲಾ ತಯಾರಾಗೆ ನಾವು ರಾಜಕೀಯಕ್ಕೆ ಬಂದಿರುತ್ತೇವೆ ಎಂದರು.
ಮೊಟ್ಟೆ ಎಸೆದ ಹುಡುಗರಿಗೆ ನಾನು ಏನು ಹೇಳುವುದಿಲ್ಲ. ಬಿಜೆಪಿ ನಾಯಕರು ಇವರೇ ಮಾಡಿಸುತ್ತಾರೆ ಎಂದು ಹೇಳಿದ್ರೆ ಏನು ಪ್ರಯೋಜನವಿಲ್ಲ. ನಾನು ಮುಖ್ಯಮಂತ್ರಿಗಳಿಗೆ ಹೇಳುವುದು ನಿಮ್ಮ ಪಕ್ಷದ ಕಾರ್ಯಕರ್ತರನ್ನು ಹದ್ದುಬಸ್ತಲ್ಲಿ ಇಟ್ಟುಕೊಂಡ್ರೆ ನಿಮಗೆ ಕ್ಷೇಮ.
ನಾನು ಪ್ರಚೋದನೆ ನೀಡುತ್ತಿಲ್ಲ. ನಮಗೇನು ಶಕ್ತಿ ಇಲ್ವಾ, ಕಾಂಗ್ರೆಸ್ ಪಾರ್ಟಿ ಮನಸ್ಸು ಮಾಡಿದ್ರೆ ಯಾವ ಮಂತ್ರಿನೂ ಕಾರ್ಯಕ್ರಮ ಮಾಡೋಕೆ ಆಗಲ್ಲ ಎಂದರು.
ನಾವು ಅದೇ ಕಪ್ಪು ಬಾಹುಟ ಹಿಡಿಯೋದು ಗೋತ್ತು. ಹೂವಿನ ಹಾರ ಹಾಕೋದು ಗೊತ್ತು. ಬೇರೆ ಏನು ಎಸೆಯಿಸಬೇಕೆಂದು ನಮಗೆ ಗೊತ್ತು.
ನಮಗೆ ಅದರ ಮೇಲೆ ನಂಬಿಕೆ ಇಲ್ಲ. ನಮಗೆ ಜನರ ಹೃದಯ ಗೆಲ್ಲಬೇಕು, ಸರ್ಕಾರದ ವೈಫಲ್ಯ ಎತ್ತಿ ಹಿಡಿಯಬೇಕು ಅಷ್ಟೇ. ಇದನ್ನು ಎಚ್ಚರಿಕೆ ಅಂತಾನಾದ್ರು ಸ್ವೀಕಾರ ಮಾಡಿ ಎಂದು ಹೇಳಿದರು.
ನಮ್ಮ ಪಾರ್ಟಿಯ ನಾಯಕರು ಗುಂಡಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪಾದಯಾತ್ರೆ ವೇಳೆ ನೀವು ಹಾಕಿದ ಕೇಸ್ಗಳಿಗೆ ಹೆದರಿದ್ವಾ.? ನಿಮ್ಮ ಪಾರ್ಟಿ ಅವರಿಗೆ ದೇಶ ಪ್ರೇಮ ಹೋರಾಟ ಎನ್ನುವುದೇ ಬರಲಿಲ್ಲ. ಇದು ಇಲ್ಲಿಗೆ ನಿಲ್ಲುತ್ತೆ ಎಂದು ನಾವು ಅಂದುಕೊಂಡಿದ್ದೇವೆ. ಅವನ್ಯಾರೋ ಎಂಪಿ ಮಹಾನುಭಾವ ತೇಜಸ್ವಿಸೂರ್ಯ ಹೇಳ್ತಾನೆ ಕಾಂಗ್ರೆಸ್ ಆಗಿದ್ರೆ ಕಲ್ಲು ಹೊಡೆಯಬಹುದು ಅಂತಾನೆ. ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯನ್ನೇ ಗುಂಡು ಹಿಟ್ಟು ಕೊಂದ್ರು ಎಂದರು.
ಸಿದ್ದರಾಮಯ್ಯಗೆ ಜೀವ ಭಯವಿದೆ ಎಂದ ಯತೀಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬೇರೆಯವರದ್ದು ನನಗೆ ಗೊತ್ತಿಲ್ಲ. ನೇರವಾಗಿ ನಾನು ಹೇಳ್ತಾ ಇದೀನಿ ಕಾಂಗ್ರೆಸ್ ಕಾರ್ಯಕರ್ತರು ಬದುಕಿದ್ದಾರೆ. ಪೊಲೀಸ್ ಇಲಾಖೆಯನ್ನು ಸರ್ಕಾರವೇ ವೀಕ್ ಮಾಡಿದೆ. ಸಿದ್ದರಾಮಯ್ಯ ಅವರ ಪಾಶ್ಚಾತ್ಯಾಪದ ವಿಚಾರ ನಂಗೆ ಗೊತ್ತಿಲ್ಲ ತಿಳಿದುಕೊಂಡು ಹೇಳ್ತೇನೆ ಎಂದರು.