ನೆಟ್ಟಿಗಾರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಡಾಲಿ…
ನಟನೆ ಜೊತೆಗೆ ಧನಂಜಯ್ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ.
ಬಡವ ರಾಸ್ಕಲ್ ಸಕ್ಸಸ್ ಬಳಿಕ ಹೆಡ್ ಬುಷ್ ಸಿನಿಮಾಗೆ ಬಂಡವಾಳ ಹೂಡಿಸಿದ್ದ ಧನಂಜಯ್ .
ಈಗ ಹೊಸ ಸಿನಿಮಾ ನಿರ್ಮಾಣಕ್ಕೆ ರೆಡಿ…ಧನಂಜಯ್ ನಿರ್ಮಾಣದಲ್ಲಿ ಟಗರು ಪಲ್ಯಾ ಚಿತ್ರ ಬರಲಿದ್ದು, ಈ ಸಿನಿಮಾ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಪ್ರೇಮ್ ಪುತ್ರಿಯ ಮೊದಲ ಸಿನಿಮಾದ ಲುಕ್ ಕೂಡ ವೈರಲ್ ಆಗಿದೆ.ಬಡವರ ಮಕ್ಕಳು ಬೆಳಿಬೇಕು ಸರ್, ಒಬ್ಬ ಬಡವರ ಮಕ್ಕಳಿಗೆ ಅವಕಾಶ ಕೊಡಬಹುದಿತ್ತಲ್ಲ ನೀವು’ ಎಂದು ಕೇಳಿದ್ದಾರೆ..
ನೆಟ್ಟಿಗರ ಪ್ರಶ್ನೆಗೆ ಧನಂಜಯ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿದ್ದವನು ಕಣೋ ಕಂದ’ ಎಂದು ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಧನಂಜಯ್ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಸೆಟ್ ಬಾಯ್ ಆಗಿದ್ದ ಉಮೇಶ್ ಈಗ ಟಗರು ಪಲ್ಯಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.