Saturday, April 26, 2025

Latest Posts

Cattle: ದನದ ಹಟ್ಟಿಯಲ್ಲಿ ಬೆಂಕಿ ಅವಘಡ : ಏಳು ಜಾನುವಾರುಗಳು ಸಜೀವ ದಹನ….

- Advertisement -

ಕಲಘಟಗಿ: ಊರ ಹೊರವಲಯದಲ್ಲಿನ ದನದ ಕೊಟ್ಟಿಗೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಬೆಂಕಿ ತಗುಲಿ ಏಳು ಜಾನುವಾರುಗಳು ಸಜೀವ ದಹನವಾದ ಘಟನೆ ಕಲಘಟಗಿ ತಾಲೂಕಿನ ತಂಬೂರ ಗ್ರಾಮದಲ್ಲಿ ಸಂಭವಿಸಿದೆ.

ರೈತನ ಪ್ರಾಣಾವಾಯುವಂತಿರುವ ಜಾನುವಾರುಗಳು ಅವರ ದಿನದ ಜೀವನವನ್ನು ಸಾಗಿಸಲು ಅವುಗಳನ್ನು ಸಾಕಿ ಅವುಗಳಿಂದ ಪ್ರತಿಫಲವನ್ನು ಪಡೆಯುತ್ತವೆ ಅದರೆ ಅವುಗಳ ಜೀವನವೇ ಅಂತ್ಯವಾದರೆ ಅವುಗಳನ್ನೇ ನಂಬಿರುವ ರೈತನ ಪಾಡು ಕಣ್ಣೀರ ಕೂಳು ಅಂತಾನೆ ಸರಿ

ತಂಬೂರ ಗ್ರಾಮದ ಯಲ್ಲಪ್ಪ ಸಿದ್ದಪ್ಪ ಹುಡೇದ ಎಂಬುವವರಿಗೆ ಸೇರಿದ ಜಾನುವಾರುಗಳು ಸಾವಿಗೀಡಾಗಿದ್ದು, ಒಂದು ದನ ಪರಾರಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

- Advertisement -

Latest Posts

Don't Miss