- Advertisement -
ಬೆಂಗಳೂರು: ಜಿಂದಾಲ್ ಭೂಮಿ ನೀಡುವ ವಿಚಾರಕ್ಕೆ ಕುರಿತಂತೆ ಕೇಂದ್ರ ಸಚಿವ ಸದಾನಂದ ಗೌಡ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸದಾನಂದಗೌಡ, ಜಿಂದಾಲ್ ಸ್ಟೀಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ಮಾಡೋದು ಮೈತ್ರಿ ಸರ್ಕಾರದ ಸಿಂಗಲ್ ಪಾಯಿಂಟ್ ಪ್ರೋಗ್ರಾಂ ಅಂತ ವಾಗ್ದಾಳಿ ನಡೆಸಿದ್ರು. ಅಲ್ಲದೆ ಸರ್ಕಾರದ ಖಜಾನೆ ಲೂಟಿ ಹೊಡೆದು ನಿಮ್ಮ ಜೇಬು ತುಂಬಿಸಿಕೊಳ್ಳುತ್ತಿರೋದ್ರಲ್ಲಿ ಅನುಮಾನವೇ ಇಲ್ಲ. ಮೊದಲು ಈ ಕೆಲಸ ಬಿಡಿ ಅಂತ ಮೈತ್ರಿ ನಾಯಕರ ವಿರುದ್ಧ ಸದಾನಂದಗೌಡ ಕಿಡಿ ಕಾರಿದ್ರು.
ಜಿಂದಾಲ್ ಸ್ಟೀಲ್ ಕಂಪನಿಗೆ ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿರೋ ಹಿಂದೆ ಮೈತ್ರಿ ಸರ್ಕಾರದ ಕೆಲ ಸಚಿವರು ಕಮೀಷನ್ ಪಡೆದಿದ್ದಾರೆ ಅನ್ನೋದು ಬಿಜೆಪಿ ಆರೋಪ.
ಅನ್ನದಾತರಿಗೆ ಇಲ್ಲಿದೆ ಗುಡ್ ನ್ಯೂಸ್…! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -