kodagu news:
ಮೊಟ್ಟೆ ಎಸೆತ ಪ್ರಕರಣ ಈಗ ಇನ್ನೊಂದು ಆಯಾಮವನ್ನು ಪಡೆದುಕೊಂಡಿದೆ. ಮೊಟ್ಟೆ ಎಸೆದು ಪ್ರತಿಭಟನೆ ಮಾಡಿದ್ದು ಕಾಂಗ್ರೆಸ್ಸಿಗರೇ ಎಂಬ ಹೇಳಿಕೆಗೆ ರೆಕ್ಕೆ ಪುಕ್ಕ ಬಂದಂತಿದೆ. ಈ ಕೃತ್ಯ ಎಸಗಿದ ಸಂಪತ್ ಎಂಬುವವ ಕಾಂಗ್ರೆಸ್ಸಿಗ ಎಂಬ ಮಾತು ಕೇಳಿ ಬರುತ್ತಿದೆ. ಆ ವ್ಯಕ್ತಿ ಜಂಪಿಂಗ್ ಸ್ಟಾರ್ ಎಂಬ ಮಾತು ಇನ್ನೊಂದೆಡೆ ಕೇಳಿ ಬರುತ್ತಿದೆ. ಮೊದಲು ಆತ ಜೆಡಿಎಸ್ ಆಗಿದ್ದ ನಂತರ ಕಾಂಗ್ರೆಸ್ ನಲ್ಲಿ ಕಾರ್ಯಕರ್ತನಾಗಿದ್ದ ,ಈಗ ಬಿಜೆಪಿ ಯವರ ಜೊತೆಯಲ್ಲಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಶಾಸಕ ಅಪ್ಪಚ್ಚು ರಂಜನ್ ಆತ ನಮ್ಮ ಕಾರ್ಯಕರ್ತನಲ್ಲ ಬಿಜೆಪಿ ಆತನನ್ನು ಒಪ್ಪಿಕೊಂಡಿಲ್ಲ ಆತನಿಗೆ ಶಿಕ್ಷೆಯಾಗಲಿ ನಮ್ಮ ಕಾರ್ಯಕರ್ತರು ಹೀಗೆ ಮಾಡಿಲ್ಲ ಎಂಬುವುದಾಗಿ ಮೊಟ್ಟೆ ಪ್ರಕರಣಕ್ಕೆ ಮೆಘಾ ಟ್ವಿಸ್ಟ್ ಸಿಕ್ಕಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜೀವ ಬೆದರಿಕೆ ಕುರಿತು ಸಂಪೂರ್ಣ ತನಿಖೆ- CM ಬೊಮ್ಮಾಯಿ