political news
ಸಿದ್ದರಾಮಯ್ಯನವರ ಚುನಾವಣಾ ಪ್ರಚಾರದಲ್ಲಿ ಕೈಗೊಂಡಿರುವ ಸಂದರ್ಭದಲ್ಲಿ ಈಗಾಗಲೆ ಹಲವಾರು ಸಮಾವೇಶಗಳ ಮೂಲಕ ರಾಜ್ಯಾದ್ಯಂತ ಪ್ರವಾಸದಲ್ಲಿ ತೊಡಗಿದ್ದಾರೆ. ಯಾವ ಕಡ ಹೋದರೂ ಒಳ್ಳೆಯ ರೀತಿಯ ಬೇಂಬಲ ಮತ್ತು ಪ್ರತಿಕ್ರಿಯೆ ಸಿಗುತ್ತಿದೆ. ಅವರ ಭಾಷಣ ಕೇಳಲು ಹಲವಾರು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ ಆದರೆ ಕೆಲವೋಂದು ಕಡೆಗಳಲ್ಲಿ ಮಾತ್ರ ಅವರಿಗೆ ಜನರಿಂದ ವಿರೋದ ವ್ಯಕ್ತವಾಗುತ್ತಿದೆ ಅದೇ ರೀತಿ ಕೊಡಗಿನಲ್ಲಿಯೂ ಸಹ ಮೊಟ್ಟೆ ಎಸೆದು ಅವಮಾನಗೊಳಿಸಿದ ವಿಷಯ ಎಲ್ಲಾರಿಗೂ ಗೊತ್ತಿದೆ ಮೊಟ್ಟೆ ಎಸೆದು ಅವಮಾನಗೊಳಿಸಿದ ಯುವಕನನ್ನು ಗ್ರಾಮದಿಂದ ಗಡಿಪಾರು ಮಾಡಬೇಕು ಎಂದು ಆದೇಶ ಹೊರಡಿಸಿದ್ದರು ಈ ಆ ಗಡಿಪಾರು ವಿಷಯದ ವಿರುದ್ದ ಪ್ರತಿಭಟನೆ ಶುರುವಾಗಿದೆ.
ಆರೋಪಿಗಳ ಗಡಿಪಾರು ಮಾಡಲು ಮುಂದಾಗಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿವೆ. ಆರೋಪಿಗಳ ಗಡಿಪಾರಿಗೆ ಪೊಲೀಸ್ ಇಲಾಖೆಯು ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಶಿಫಾರಸು ಮಾಡಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಹಿಂದೂ ಕಾರ್ಯಕರ್ತರು, ಗಡಿಪಾರು ನೋಟಿಸ್ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಮಡಿಕೇರಿ ನಗರದ ಜ. ತಿಮ್ಮಯ್ಯ ವೃತ್ತದಲ್ಲೂ ಪ್ರತಿಭಟನೆ ನಡೆಯಿತು. ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಕವನ್ ಕಾವೇರಪ್ಪ, ವಿನಯ್ ಗಡಿಪಾರಿಗೆ ಪೊಲೀಸ್ ಇಲಾಖೆ ಶುಫಾರಸು ಮಾಡಿದ ಹಿನ್ನಲೆ ಎಸಿ ಯತೀಶ್ ಉಲ್ಲಾಳ್ ಅವರು ಆರೋಪಿಗಳಿಗೆ ನೋಟಿಸ್ ಜಾರಿ ನಿಮನ್ನು ಯಾಕೆ ಗಡಿ ಪಾರು ಮಾಡಬಾರದೆಂದು ಕಾರಣ ಕೇಳಿದ್ದರು.
ಸಂಜೀವಿನಿ ಹುಡುಕಾಟದಲ್ಲಿದೆ ಪ್ರಪಂಚ..?! ಭಾರತದಲ್ಲಿದೆ ಸಾವೇ ಬಾರದ ನಗರ..?!