Sunday, October 27, 2024

Latest Posts

Factory: ಕಾರ್ಖಾನೆಯಿಂದ ಪ್ರಾಣ ಸಂಕಟ, ಮನವಿ ಸಲ್ಲಿಸಿದರೂ ಸಿಗುತ್ತಿಲ್ಲ ಪರಿಹಾರ;

- Advertisement -

ಹುಬ್ಬಳ್ಳಿ : ಪ್ರಾಣಿಗಳ ಆಹಾರ ತಯಾರಿಕೆ ಕಾರ್ಖಾನೆ ಬಂದ್ ಮಾಡಬೇಕು ಎಂದು ಅಂಚಟಗೇರಿ ಗ್ರಾಮಸ್ಥರು ಸಾಕಷ್ಟು ಮನವಿಗಳನ್ನು ಸಲ್ಲಿಸಿದರು ಕೂಡ ಪರಿಹಾರ ಸಿಗುತ್ತಿಲ್ಲ. ಅಂಚಟಗೇರಿ ಸುತ್ತ ಮುತ್ತಲಿನ ಗ್ರಾಮಸ್ತರಿಗೆ ಪ್ರಾಣ ಸಂಕಟ ಎದುರಾಗಿದೆ.

ಹೌದು ಅಂಚಟಗೇರಿ ಗ್ರಾಮದಲ್ಲಿ ಪ್ರಾರಂಭವಾದ (ವೆಂಟಕ್ ಪ್ರೋಟೀನ್ ರಿಕವರಿ ಪ್ಲಾಂಟ್ ಎಲ್ ಎಲ್ ಪೀ) ಕಾರ್ಖಾನೆಯಿಂದ ಹೊರ ಸೂಸುವ ದುರ್ವಾಸನೆಯಿಂದ ತೊಂದರೆಯಾಗುತ್ತಿದೆ. ಮಕ್ಕಳಿಗೆ ಊಟದ ಸಮಯದಲ್ಲಿ ವಾಂತಿ ಉಂಟಾಗುತ್ತದೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಕೆಲಸಗಾರರು ಕೂಡ ಬರುತ್ತಿಲ್ಲ, ಈ ಕುರಿತು ಗಂಭೀರವಾಗಿ ಅಂಚಟಗೇರಿ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ.

ಈಗಾಗಲೇ ಈ ಕುರಿತು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಕೆ ಮಾಡಲಾಗಿದೆ. ಧಾರವಾಡ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಯಾವುದೇ ಸ್ಪಂದನೆ ನೀಡದಿದ್ದರೆ ಅಂಚಿಟಗೇರಿ ಗ್ರಾಮಸ್ಥರ ನೇತೃತ್ವದಲ್ಲಿ ಕಾರ್ಖಾನೆಗೆ ಹೋಗುವ ರಸ್ತೆಯನ್ನು ಬಂದ್ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

Tirupathi: ತಿಮ್ಮಪ್ಪನ ದರ್ಶನ ಪಡೆದ ಗೌರವಾನ್ವಿತ ರಾಜ್ಯಪಾಲರು

Court : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಯುವಕನಿಗೆ 20 ವರ್ಷ ಜೈಲು ಶಿಕ್ಷೆ

Speaker Wishes : ಚಂದ್ರನ ಅಂಗಳದಲ್ಲಿ ವಿಕ್ರಮ: ಬಸವರಾಜ ಹೊರಟ್ಟಿ ಕೋಟಿ ಕೋಟಿ ಅಭಿನಂದನೆ..

- Advertisement -

Latest Posts

Don't Miss