Saturday, April 12, 2025

Latest Posts

ಇನ್ನು 3 ದಿನ ಅಭಿಮಾನಿಗಳಿಗಿಲ್ಲ ಅಪ್ಪು ಸಮಾಧಿ ದರ್ಶನ ಭಾಗ್ಯ..!

- Advertisement -

www.karnatakatv.net: ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಾದ ಮೂರು ದಿನಗಳ ಬಳಿಕ ಅಂದ್ರೆ, ಮಂಗಳವಾರದoದು ಅಪ್ಪು ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯಕ್ರಮ ನಡೆಯಲಿದೆ.

ಇನ್ನು ಹಾಲು ತುಪ್ಪ ನೆರವೇರುವ ವರೆಗೂ ಅಪ್ಪು ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇನ್ನು ಇಂದೂ ಕೂಡ ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋದತ್ತ ಧಾವಿಸುತ್ತಿದ್ದಾರೆ. ಆದ್ರೆ ಅವರನ್ನು ನಿಯಂತ್ರಣ ಮಾಡೋದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇನ್ನು ಹಾಲು ತುಪ್ಪ ಬಳಿಕವಷ್ಟೇ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ.

- Advertisement -

Latest Posts

Don't Miss