Special Story:
ರೈತನೋರ್ವ ವಿಚಿತ್ರ ಸಾಹಸಕ್ಕೆ ಕೈ ಹಾಕಿದ್ದಾನೆ. ಈತನ ಕೆಲಸ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಅಜ್ಜಿಪುರ ಗ್ರಾಮದ ರೈತನೊಬ್ಬ ತನ್ನ ಬೆಳೆಯ ರಕ್ಷಣೆಗಾಗಿ ತನ್ನ ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ರಸ್ತೆಗೆ ಬಿಟ್ಟಿದ್ದಾನೆ. ಕೋತಿ ಮತ್ತಿತರ ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಇಂತಹ ವಿಲಕ್ಷಣ ತಂತ್ರ ಅನುಸರಿಸಿದ್ದಾನೆ ರೈತ ಮಹಾಶಯ. ಶ್ವಾನವೀಗ ಥೇಟ್ ಹುಲಿಯಂತೆ ಕಾಣುತ್ತಿದೆ. ಜಾಲತಾಣಗಳಲ್ಲಿ ಹುಲಿ ಬಣ್ಣದ ನಾಯಿಯ ವಿಡಿಯೋ ಹಾಗೂ ಫೋಟೋಗಳು ಈಗ ಸಖತ್ ವೈರಲ್ ಆಗಿದೆ.
ಹುಲಿಯೆಂದು ಭಾವಿಸಿ ಓಡಿಹೋಗುತ್ತಿದ್ದ ಜನರಿಗೆ ಬೌ ಬೌ ಶಬ್ದದಿಂದ ಬೊಗಳಿದಾಗ ಹುಲಿಯಲ್ಲ ನಾಯಿ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಹುಲಿಬಣ್ಣ ಬಳಿದ ನಾಯಿಯನ್ನು ಕಂಡ ಜನ ಮುಸಿಮುಸಿ ನಗುತ್ತಿದ್ದಾರೆ. ರೈತನ ಕೈ ಚಳಕಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
“ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೇರು ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ:” ಸಿಎಂ ಬೊಮ್ಮಾಯಿ
ಉತ್ತರ ಕರ್ನಾಟಕ ಉತ್ಸವ ಲೋಗೊ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ